ಶಕಲಕ ಬೂಂ ಬೂಂ ತುಳುಚಿತ್ರ

Update: 2019-11-19 15:24 GMT

ಉಡುಪಿ, ನ.19: ಶ್ರೀಶ ಎಲ್ಲಾರೆ ಇವರ ನಿರ್ದೇಶನದಲ್ಲಿ ತುಳು ಹಾರರ್- ಕಾಮಿಡಿ ಚಿತ್ರ ‘ಶಕಲಕ ಬೂಂ ಬೂಂ’ಗೆ ಎಲ್ಲಾ ಸಿದ್ಧತೆಗಳು ಮುಗಿದಿದ್ದು, ಮುಂದಿನ ತಿಂಗಳಿನಿಂದ ಜಿಲ್ಲೆಯ ಉಡುಪಿ, ಮಣಿಪಾಲ, ಪರ್ಕಳ, ಕಾರ್ಕಳ, ಮಂಗಳೂರು, ಚಿಕ್ಕ ಮಗಳೂರುಗಳಲ್ಲಿ 25 ದಿನಗಳ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರದ ನಾಯಕ ಎಸ್‌ಪಿಎಲ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿತ್ಯಾನಂದ ನರಸಿಂಗೆ ಹಾಗೂ ಉಮೇಶ್ ಪ್ರಭು ಚಿತ್ರದ ನಿರ್ದೇಶಕರಾಗಿದ್ದು, ಕತೆ ಮತ್ತು ಚಿತ್ರಕತೆಯನ್ನು ತಾನೇ ಬರೆದಿರುವುದಾಗಿ ನಾಯಕ ನಟ ಎಸ್‌ಪಿಎಲ್ ತಿಳಿಸಿದರು.

ಚಿತ್ರದಲ್ಲಿ ಖ್ಯಾತ ಹಾಸ್ಯನಟ ಅರವಿಂದ ಬೋಳಾರ್ ಜಿನಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೊಸ ಪರಿಚಯ ಲಕ್ಷ ಶೆಟ್ಟಿ ನಾಯಕಿಯಾಗಿರುವರು. ಉಳಿದಂತೆ ಕೋಸ್ಟಲವುಡ್‌ನ ಉಮೇಶ್ ಮಿಜಾರ್, ರವಿರಾಮ ಕುಂಜ, ರೂಪಶ್ರೀ ವರ್ಕಾಡಿ, ವಸಂತ್ ಮುನಿಯಾಲ್, ಮನೋಹರ್ ನಂದಳಿಕೆ ನಟಿಸಲಿದ್ದಾರೆ ಎಂದವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಶ್ರೀಶ ಎಳ್ಳಾರೆ, ನಾಯಕ ಗಾಡ್ವಿನ್ ಸ್ಪಾರ್ಕ್‌ಲ್, ನಿರ್ಮಾಪಕ ನಿತ್ಯಾನಂದ ನರಸಿಂಗೆ, ನಾಯಕಿ ಲಕ್ಷ ಶೆಟ್ಟಿ ಉಪಸ್ಥಿತ ರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News