‘ಲಗಾಡಿ’ ಕಿರುಚಿತ್ರಕ್ಕೆ ಮುಹೂರ್ತ

Update: 2019-11-19 15:42 GMT

ಮಂಗಳೂರು, ನ.19: ಆರ್.ಎ. ಮತ್ತು ಜಿಎಸ್‌ವಿ ಪ್ರೊಡಕ್ಷನ್ ನಿರ್ಮಾಣದ ಚಿಗುರು ಸಿನಿ ಕ್ರಿಯೇಷನ್ಸ್ ತಂಡದ ಕಿರುಚಿತ್ರ ‘ಲಗಾಡಿ’ಯ ಮುಹೂರ್ತ ಕಾರ್ಯಕ್ರಮ ನಗರದ ಶರವು ದೇವಸ್ಥಾನದಲ್ಲಿ ಇತ್ತೀಚೆಗೆ ಜರುಗಿತು.

ಡಾ.ಸುರೇಶ್ ನೆಗಳಗುಳಿ ಕ್ಯಾಮರಾಕ್ಕೆ ಚಾಲನೆ ನೀಡಿದರು. ನಿವೃತ್ತ ಸೈನಿಕ ಹಾಗೂ ನಟ ತಾರಾನಾಥ ಬೋಳಾರ್ ಚಿತ್ರತಂಡಕ್ಕೆ ಶುಭ ಹಾರೈಸಿದರು. ಲಗಾಡಿ ಕಿರುಚಿತ್ರವು ನೈಜ ಘಟಣೆಯ ಆಧಾರಿತವಾಗಿದೆ. ಇದು ತುಳು ಕಿರುಚಿತ್ರವಾಗಿದ್ದು ಸಮಾಜಕ್ಕೆ ಉತ್ತಮ ಸಂದೇಶ ನೀಡಲು ಚಿತ್ರತಂಡ ಹೊರಟಿದೆ ಎಂದು ಚಿತ್ರದ ನಿರ್ದೇಶಕ ಪ್ರಮೀತ್‌ರಾಜ್ ಕಟ್ಟತ್ತಾರು ಹೇಳಿದರು.

ಕಥೆ, ಚಿತ್ರಕಥೆ ಸಂಭಾಷಣೆ ಹಾಗೂ ನಿರ್ದೇಶನವನ್ನು ಪ್ರಮೀತ್ ರಾಜ್ ಕಟ್ಟತ್ತಾರು ಮಾಡಲಿದ್ದಾರೆ. ಅರುಣ್ ರೈ ಪುತ್ತೂರು ಛಾಯಾಗ್ರಹಣ ಮಾಡುವರು. ನಿರ್ದೇಶನ ತಂಡದಲ್ಲಿ ಸತೀಶ್, ಕಾರ್ತಿಕ್ ಸುಬ್ರಹ್ಮಣ್ಯಂ ಹಾಗೂ ಮಂಜುನಾಥ್ ಇರಲಿದ್ದಾರೆ. ವಿಕ್ರಮ್ ಆದಿತ್ಯ, ವಿಜೇತ್ ಸುವರ್ಣ, ಗಿರೀಶ್, ಪ್ರೇಕ್ಷ ಶೆಟ್ಟಿ ಅಭಿನಯಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News