ಮಂಗಳೂರು : ‘ಚಿನ್ನದ ಸರ’ ಬಿದ್ದು ಸಿಕ್ಕಿದೆ

Update: 2019-11-19 15:58 GMT

ಮಂಗಳೂರು, ನ.19: ಮೂಲತಃ ಕುಳಾಯಿಯ ಪ್ರಸ್ತುತ ಬಿಸಿ ರೋಡ್‌ನಲ್ಲಿ ನೆಲೆಸಿರುವ ಸುರತ್ಕಲ್‌ನಲ್ಲಿ ವ್ಯಾಪಾರ ಮಾಡುತ್ತಿರುವ ಮುಹಮ್ಮದ್ ಮುಸ್ತಫಾ ಎಂಬವರಿಗೆ ಮೂರು ವಾರದ ಹಿಂದೆ (ರವಿವಾರ ರಾತ್ರಿ ಸುಮಾರು 8:30ಕ್ಕೆ) ನಗರದ ಅಂಬೇಡ್ಕರ್ ವೃತ್ತದ ಬಳಿಯ ಜ್ಯೋತಿ ಸಮೀಪದ ಸುಮಾರು 1 ಪವನು ತೂಕದ ಚಿನ್ನದ ಸರ ಸಿಕ್ಕಿರುತ್ತದೆ.

ಈ ಬಗ್ಗೆ ಅವರು ಈಗಾಗಲೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದರೂ ಕೂಡಾ ಇನ್ನೂ ಅದರ ವಾರಸುದಾರರು ತನ್ನನ್ನು ಸಂಪರ್ಕಿಸಿಲ್ಲ ಎಂದು ಮುಸ್ತಫಾ ಪತ್ರಿಕೆಗೆ ತಿಳಿಸಿದ್ದಾರೆ.

ಹಾಗಾಗಿ ಈ ಚಿನ್ನದ ಸರದ ವಾರಸುದಾರರು ಇದ್ದಲ್ಲಿ ಆದಷ್ಟು ಬೇಗ ತನ್ನನ್ನು (ಮೊ.ಸಂ: 9036849969) ಸಂಪರ್ಕಿಸಬಹುದು ಮತ್ತು ಅದರ ಗುರುತು ಹೇಳಿಕೊಂಡು ಪಡೆಯಬಹುದು ಎಂದು ಮುಸ್ತಫಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News