ವಿದ್ಯಾರ್ಥಿಗಳಿಗೆ ಕೈ ಸ್ವಚ್ಛತಾ ಕುರಿತ ಮಾಹಿತಿ ಕಾರ್ಯಕ್ರಮ

Update: 2019-11-19 16:44 GMT

ಉಡುಪಿ, ನ.19: ಕುತ್ಪಾಡಿ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಯೂತ್ ರೆಡ್‌ಕ್ರಾಸ್ ವತಿಯಿಂದ ಉದ್ಯಾವರ ಕೊರಂಗ್ರಪಾಡಿಯ ಎಂಇಟಿ ಪಬ್ಲಿಕ್ ಸ್ಕೂಲ್ನ ವಿದ್ಯಾರ್ಥಿಗಳಿಗೆ ಕೈ ಸ್ವಚ್ಛತಾ ಬಗ್ಗೆ ಮಾಹಿತಿ ಕಾರ್ಯ ಕ್ರಮವನ್ನು ನ.18ರಂದು ಶಾಲೆಯಲ್ಲಿ ಆಯೋಜಿಸಲಾಗಿತ್ತು.

ಕಾಲೇಜಿನ ದ್ರವ್ಯಗುಣ ವಿಭಾಗದ ಸಹಾಯಕ ಪ್ರೊಫೆಸರ್ ಡಾ.ತೇಜಸ್ವಿ ನಾಯ್ಕ ಈ ಕುರಿತು ಮಾಹಿತಿ ನೀಡಿದರು. ದ್ರವ್ಯಗುಣ ವಿಭಾಗದ ಪ್ರೊಫೆಸರ್ ಡಾ.ಮಹಮ್ಮದ್ ಫೈಝಲ್ ಕಾರ್ಯಕ್ರಮ ನಿಯೋಜಿಸಿದ್ದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಆಲ್ಬನ್ ಫ್ರಾನ್ಸಿಸ್ ಪಿಕಾರ್ಡೊ, ಶಾಲಾ ಮುಖ್ಯಸ್ಥೆ ಜುನೇದಾ ಸುಲ್ತಾನ ಮೊದಲಾದವರು ಉಪ ಸ್ಥಿತರಿದ್ದರು.

ಸಬೀನಾ ಸ್ವಾಗತಿಸಿದರು. ಅಮ್ರೀನ್ ವಂದಿಸಿದರು. ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News