ಇಂದಿರಾಗಾಂಧಿ ಜನ್ಮದಿನ : ಮಹಿಳಾ ಕಾಂಗ್ರೆಸ್‌ನಿಂದ ಹಣ್ಣು ಹಂಪಲು ವಿತರಣೆ

Update: 2019-11-19 16:47 GMT

ಮಂಗಳೂರು, ನ.19: ಉಕ್ಕಿನ ಮಹಿಳೆ, ಮಾಜಿ ಪ್ರಧಾನಿ ಇಂದಿರಾಗಾಂಧಿಯವರ 102ನೇ ಜನ್ಮ ದಿನಾಚರಣೆಯ ಪ್ರಯುಕ್ತ ದ.ಕ. ಮಹಿಳಾ ಕಾಂಗ್ರೆಸ್‌ನಿಂದ ಮಂಗಳೂರು ನಗರದ ಸರಕಾರಿ ಲೇಡಿಗೋಶನ್ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ದ.ಕ. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಮನಪಾ ನೂತನ ಸದಸ್ಯೆ ಝೀನತ್ ಸಂಶುದ್ದೀನ್, ದ.ಕ. ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳಾದ ದೇವಕಿ, ಉಷಾ ಶರತ್, ಸುರೇಖಾ ಉಳ್ಳಾಲ, ನಮಿತಾ ಡಿ.ರಾವ್, ಶಾಂತಲಾ ಗಟ್ಟಿ, ಶೋಭಾ ಕೇಶವ್, ಮಲ್ಲಿಕಾ ಪಕ್ಕಳ, ಪ್ರವೀಣಾ ಆರ್., ತನ್ವೀರ್ ಷಾ, ಮಮತಾ ಶೆಟ್ಟಿ, ಗೀತಾ ಅತ್ತಾವರ, ಗೀತಾ ಪ್ರವೀಣ್, ಸಬೀತಾ ಮಿಸ್ಕಿತ್, ರೂಪಾ ಚೇತನ್, ಮಂಜುಳಾ ವೈ.ನಾಯಕ್, ಜ್ಯೋತಿ ಎಲ್.ದೇವಾಡಿಗ, ಆಶಾಲತಾ, ವಿನುತಾ ರಾವ್, ಸರಸ್ವತಿ ಸಾಲಿಯಾನ್, ವಿಕ್ಟೋರಿಯಾ, ಸೆಲೆಸ್ತಿನ್ ಕ್ರಾಸ್ತಾ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News