ನ.21: ಮಂಗಳೂರಿನಲ್ಲಿ ‘ರಾಜಧಾನಿ’ ಚಿನ್ನಾಭರಣ ಮಳಿಗೆ ಶುಭಾರಂಭ

Update: 2019-11-20 13:20 GMT

ಮಂಗಳೂರು, ನ.20: ಚಿನ್ನ ಮತ್ತು ವಜ್ರಾಭರಣಕ್ಕೆ ಪ್ರಸಿದ್ಧಿ ಪಡೆದಿರುವ ‘ರಾಜಧಾನಿ’ ಚಿನ್ನಾಭರಣ ಮಳಿಗೆಯು ನ.21ರಂದು ಪೂರ್ವಾಹ್ನ 11 ಗಂಟೆಗೆ ನಗರದ ಸೆಂಟ್ರಲ್ ಮಾರ್ಕೆಟ್ ರಸ್ತೆಯ ಮಂಗಳಾ ಶಾಪಿಂಗ್ ಆರ್ಕೇಡ್‌ನಲ್ಲಿ ಶುಭಾರಂಭಗೊಳ್ಳಲಿದ್ದು, ಕೆ.ಎಸ್. ಸೈಯದ್ ಅಲಿ ತಂಙಳ್ ಕುಂಬೋಳ್ ಈ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ.

ಚಿನ್ನಾಭರಣ, ವಜ್ರಾಭರಣ, ಬೆಳ್ಳಿ, ವಾಚ್‌ಗೆ ಪ್ರಸಿದ್ಧಿ ಪಡೆದಿರುವ ‘ರಾಜಧಾನಿ’ಯು ಈಗಾಗಲೆ ಹೊಸಂಗಡಿ, ತೊಕ್ಕೊಟ್ಟು, ಸುರತ್ಕಲ್, ಫರಂಗಿಪೇಟೆಯಲ್ಲಿ ಕಾರ್ಯಾಚರಿಸುತ್ತಿವೆ. ಇದೀಗ ಐದನೆ ಮಳಿಗೆಯು ನ.21ರಂದು ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ ರಸ್ತೆಯ ಮಂಗಳಾ ಶಾಪಿಂಗ್ ಆರ್ಕೇಡ್‌ನಲ್ಲಿ ಆರಂಭಗೊಳ್ಳಲಿದೆ. ಈ ಮಳಿಗೆಗಳಲ್ಲದೆ ಬೇರೆ ಯಾವ ಮಳಿಗೆಗೂ ‘ರಾಜಧಾನಿ’ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ ಎಂದು ಮಾಲಕರು ತಿಳಿಸಿದ್ದಾರೆ.

ಮಳಿಗೆಯ ಶುಭಾರಂಭದ ಪ್ರಯುಕ್ತ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸದಸ್ಯರಿಗೆ ಪ್ರಥಮ, ದ್ವಿತೀಯ, ತೃತೀಯ ‘ಚಿನ್ನದ ನಾಣ್ಯ’ ಗೆಲ್ಲುವ ಅವಕಾಶ ಕಲ್ಪಿಸಲಾಗಿದೆ. ಷರತ್ತುಗಳ ಅನ್ವಯದೊಂದಿಗೆ ಶೇ.3ರಷ್ಟು ಮೇಕಿಂಗ್ ಚಾರ್ಜ್ ರಿಯಾಯಿತಿ ನೀಡಲಾಗುವುದು ಎಂದು ಮಾಲಕರಾದ ಅಶ್ರಫ್ ಕೆ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News