ಮಹಾರಾಷ್ಟ್ರ ಸಿಎಂ ಆಗಿ ಉದ್ಧವ್ ಠಾಕ್ರೆ ಪ್ರಮಾಣ: ಶರದ್ ಪವಾರ್ ಘೋಷಣೆ
Update: 2019-11-22 13:55 GMT
ಹೊಸದಿಲ್ಲಿ, ನ.22: ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ಮೈತ್ರಿ ಸರಕಾರದ ನೇತೃತ್ವವನ್ನು ಉದ್ಧವ್ ಠಾಕ್ರೆ ವಹಿಸಲಿದ್ದಾರೆ ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
ಮೈತ್ರಿ ವಿಚಾರಕ್ಕೆ ಸಂಬಂಧಿಸಿ ಮೂರು ಪಕ್ಷಗಳ ನಾಯಕರು ಮುಂಬೈಯ ನೆಹರೂ ಕೇಂದ್ರದಲ್ಲಿ ಮಾತುಕತೆ ನಡೆದ ನಂತರ ಎನ್ ಸಿಪಿ ನಾಯಕನಿಂದ ಈ ಹೇಳಿಕೆ ಹೊರಬಿದ್ದಿದೆ.