ಮಹಾರಾಷ್ಟ್ರ: ಶಾಸಕರನ್ನು ಹೊಟೇಲ್ಗಳಿಗೆ ವರ್ಗಾಯಿಸಿದ ಕಾಂಗ್ರೆಸ್, ಶಿವಸೇನೆ
Update: 2019-11-24 15:15 GMT
ಮುಂಬೈ, ನ. 24: ಬಿಜೆಪಿ ಶಾಸಕರನ್ನು ಖರೀದಿಸುವ ಭೀತಿಯಿಂದ ಕಾಂಗ್ರೆಸ್, ಶಿವಸೇನೆ ಹಾಗೂ ಎನ್ಸಿಪಿ ತನ್ನ ಶಾಸಕರನ್ನು ಮುಂಬೈಯ ಹೊಟೇಲ್ಗಳಿಗೆ ವರ್ಗಾಯಿಸಿದೆ. ಕಾಂಗ್ರೆಸ್ ತನ್ನ ಶಾಸಕರನ್ನು ರವಿವಾರ ಮುಂಬೈಯಲ್ಲಿರುವ ಅಂಧೇರಿಯ ಜೆ. ಡಬ್ಲು ಮ್ಯಾರಿಯಟ್ ಹೊಟೇಲ್ಗೆ ಸ್ಥಳಾಂತರಿಸಿದೆ.
ಶಿವಸೇನೆ ತನ್ನ 56 ಶಾಸಕರಲ್ಲಿ 55 ಶಾಸಕರನ್ನು ಲಲಿತ್ ಹೊಟೇಲ್ಗೆ ವರ್ಗಾಯಿಸಿದೆ. ಶರದ್ ಪವಾರ್ರ ಎನ್ಸಿಪಿ ತನ್ನ ಶಾಸಕರನ್ನು ಮುಂಬೈಯ ಪೊವಾಯಿಯ ರಿನಾಸನ್ಸ್ ಹೊಟೇಲ್ಗೆ ನಿನ್ನೆ ರಾತ್ರಿ ಬಸ್ಗಳಲ್ಲಿ ಕರೆದೊಯ್ದಿದೆ.
ಮೊಬೈಲ್ ಅನ್ನು ಹಸ್ತಾಂತರಿಸುವಂತೆ ಮೂರು ಪಕ್ಷಗಳು ಕೂಡ ತಮ್ಮ ಶಾಸಕರಿಗೆ ಆದೇಶಿಸಿದೆೆ. ನವೆಂಬರ್ 30ರಂದು ನಡೆಯಲಿದೆ ಎಂದು ಹೇಳಲಾಗುವ ಬಲಾಬಲ ಪರೀಕ್ಷೆಯಲ್ಲಿ ಬಿಜೆಪಿಯನ್ನು ಸೋಲಿಸುವುದು ನಿರ್ಣಾಯಕವಾಗಿರುವುದರಿಂದ ನಮ್ಮ ಶಾಸಕರನ್ನು ಹೊಟೇಲ್ಗಳಲ್ಲಿ ಇರಿಸಲಾಗಿದೆ ಎಂದು ಕಾಂಗ್ರೆಸ್ ಹಾಗೂ ಶಿವಸೇನೆ ಮೂಲಗಳು ತಿಳಿಸಿವೆ.