162 ಶಾಸಕರ ಸಹಿ ಸಲ್ಲಿಕೆ: ಸರಕಾರ ರಚನೆಗೆ ಅವಕಾಶ ಕೇಳಿದ ಶಿವಸೇನೆ, ಎನ್ ಸಿಪಿ, ಕಾಂಗ್ರೆಸ್

Update: 2019-11-25 07:17 GMT

ಮುಂಬೈ, ನ.25: ಮಹಾರಾಷ್ಟ್ರ ರಾಜ್ಯಪಾಲರಿಗೆ 162 ಶಾಸಕರ ಸಹಿ ಇರುವ ಪತ್ರವನ್ನು ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ನಿಯೋಗ ಸಲ್ಲಿಸಿದ್ದು, ಸರಕಾರ ರಚನೆಗೆ ಅವಕಾಶ ಕೇಳಿದೆ.

ನಾವು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತೇವೆ ಎಂದು ಅಜಿತ್ ಪವಾರ್ ಹೇಳುತ್ತಿದ್ದರೂ ಈ ಸಹಿಗಳಲ್ಲಿ 54 ಎನ್ ಸಿಪಿ ಶಾಸಕರ ಪೈಕಿ 51 ಮಂದಿಯ ಸಹಿ ಇದೆ. 228 ಸದಸ್ಯರ ಮಹಾರಾಷ್ಟ್ರ ವಿಧಾನಸಭೆಯ ಬಹುಮತ ನಮ್ಮಲ್ಲಿದೆ ಎಂದು ನಿಯೋಗ ತಿಳಿಸಿದೆ.

ಶಿವಸೇನೆ 63, ಕಾಂಗ್ರೆಸ್ 44 ಮತ್ತು ಎನ್ ಸಿಪಿ 51 ಶಾಸಕರ ಸಹಿಗಳನ್ನು ಸಲ್ಲಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News