162 ಶಾಸಕರ ಸಹಿ ಸಲ್ಲಿಕೆ: ಸರಕಾರ ರಚನೆಗೆ ಅವಕಾಶ ಕೇಳಿದ ಶಿವಸೇನೆ, ಎನ್ ಸಿಪಿ, ಕಾಂಗ್ರೆಸ್
Update: 2019-11-25 07:17 GMT
ಮುಂಬೈ, ನ.25: ಮಹಾರಾಷ್ಟ್ರ ರಾಜ್ಯಪಾಲರಿಗೆ 162 ಶಾಸಕರ ಸಹಿ ಇರುವ ಪತ್ರವನ್ನು ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ನಿಯೋಗ ಸಲ್ಲಿಸಿದ್ದು, ಸರಕಾರ ರಚನೆಗೆ ಅವಕಾಶ ಕೇಳಿದೆ.
ನಾವು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತೇವೆ ಎಂದು ಅಜಿತ್ ಪವಾರ್ ಹೇಳುತ್ತಿದ್ದರೂ ಈ ಸಹಿಗಳಲ್ಲಿ 54 ಎನ್ ಸಿಪಿ ಶಾಸಕರ ಪೈಕಿ 51 ಮಂದಿಯ ಸಹಿ ಇದೆ. 228 ಸದಸ್ಯರ ಮಹಾರಾಷ್ಟ್ರ ವಿಧಾನಸಭೆಯ ಬಹುಮತ ನಮ್ಮಲ್ಲಿದೆ ಎಂದು ನಿಯೋಗ ತಿಳಿಸಿದೆ.
ಶಿವಸೇನೆ 63, ಕಾಂಗ್ರೆಸ್ 44 ಮತ್ತು ಎನ್ ಸಿಪಿ 51 ಶಾಸಕರ ಸಹಿಗಳನ್ನು ಸಲ್ಲಿಸಿವೆ.