ತನ್ನ ಟ್ವಿಟರ್ ಬಯೋದಿಂದ `ಕಾಂಗ್ರೆಸ್' ಹೆಸರು ತೆಗೆದುಹಾಕಿದ ಜ್ಯೋತಿರಾದಿತ್ಯ ಸಿಂಧಿಯಾ!

Update: 2019-11-25 07:49 GMT

ಹೊಸದಿಲ್ಲಿ, ನ.25: ಮಹತ್ವದ ಬೆಳವಣಿಗೆಯಲ್ಲಿ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ತಮ್ಮ ಟ್ವಿಟರ್ ಬಯೋದಿಂದ ತಮ್ಮ ಪಕ್ಷದ ಹೆಸರು ತೆಗೆದು ಬಿಟ್ಟಿದ್ದಾರೆ. ಅವರ ಹೊಸ ಟ್ವಿಟ್ಟರ್ ಪ್ರೊಫೈಲ್‍ ನಲ್ಲಿ ಅವರು ತಮ್ಮನ್ನು 'ಜನಸೇವಕ ಹಾಗೂ ಕ್ರಿಕೆಟ್ ಪ್ರೇಮಿ' ಎಂದಷ್ಟೇ ಬರೆದಿದ್ದಾರೆ.

ಕಮಲ್‍ನಾಥ್ ಅವರನ್ನು ಮಧ್ಯ ಪ್ರದೇಶದ ಮುಖ್ಯಮಂತ್ರಿಯಾಗಿಸಿದಾಗಿನಿಂದ ಸಿಂಧಿಯಾ ಅವರನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷರನ್ನಾಗಿಸಬೇಕೆಂದು ಅವರ ಬೆಂಬಲಿಗರು ಬೇಡಿಕೆಯಿಡುತ್ತಲೇ ಇದ್ದಾರೆ.

ಮುಖ್ಯಮಂತ್ರಿ ಕಮಲ್‍ ನಾಥ್ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಇಬ್ಬರೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷತೆಗಾಗಿ ದಿವಂಗತ ಅರ್ಜುನ್ ಸಿಂಗ್ ಅವರ ಪುತ್ರ ಅಜಯ್ ಸಿಂಗ್ ಅವರಿಗಾಗಿ ಲಾಬಿ ನಡೆಸುತ್ತಿರುವುದೇ ಸಿಂಧಿಯಾ ಅಸಂತುಷ್ಟರಾಗಲು ಕಾರಣವೆನ್ನಲಾಗಿದೆ.

ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷತೆಯನ್ನು ತೊರೆದ ಬಳಿಕ ಸಿಂಧಿಯಾ ಪಕ್ಷದ  ಪ್ರಧಾನ ಕಾರ್ಯದರ್ಶಿ ಹುದ್ದೆಗೂ ರಾಜೀನಾಮೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News