ಪಶ್ಚಿಮ ಬಂಗಾಳ: ನಮ್ಮ ಸೋಲಿಗೆ ಎನ್ ಆರ್ ಸಿ ಕಾರಣ ಎಂದ ಬಿಜೆಪಿ ಅಭ್ಯರ್ಥಿ

Update: 2019-11-28 16:49 GMT

ಹೊಸದಿಲ್ಲಿ, ನ.28: ಪಶ್ಚಿಮ ಬಂಗಾಳ ವಿಧಾನಸಭಾ ಉಪಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ ಮೂರೂ ಕ್ಷೇತ್ರಗಳಲ್ಲಿ ಜಯ ಗಳಿಸಿದ್ದು, ಬಿಜೆಪಿ ಹೀನಾಯ ಸೋಲು ಕಂಡಿದೆ. ಬಿಜೆಪಿ  ಅಭ್ಯರ್ಥಿಗಳ ಸೋಲಿಗೆ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ವಿವಾದವೇ ಕಾರಣ ಎಂದು ಕಾಲಿಯಾಗಂಜ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಮಲಚಂದ್ರ ಸರ್ಕಾರ್ ಹೇಳಿದ್ದಾರೆ.

ಜನತೆಗೆ ಎನ್‌ಆರ್‌ ಸಿ ಬಗ್ಗೆ ಭಯವಿತ್ತು. ಎನ್‌ ಆರ್‌ಸಿಯ ಬಗ್ಗೆ ನಾವು ವಿವರಿಸಲಿಲ್ಲ. 2019ರ ಭರ್ಜರಿ ಮುನ್ನಡೆಯ ಹೊರತಾಗಿಯೂ ನಾವು ಸೋತಿದ್ದೇವೆ ಎಂದು ಸರ್ಕಾರ್ ಹೇಳಿದರು. ಚುನಾವಣಾ ಪ್ರಚಾರದ ಸಂದರ್ಭ ರಾಜ್ಯ ಮತ್ತು ಕೇಂದ್ರದ ಬಿಜೆಪಿ ಮುಖಂಡರು ಎನ್‌ ಆರ್‌ಸಿ ವಿಷಯವನ್ನು ಪ್ರಮುಖವಾಗಿ ಪ್ರಸ್ತಾವಿಸಿದ್ದರು.

ಕಾಲಿಯಾಗಂಜ್ ನಲ್ಲಿ ತೃಣಮೂಲ ಕಾಂಗ್ರೆಸ್ ನ ತಪನ್ ದೇಬ್ ಸಿಂಘಾ ವಿರುದ್ಧ ಬಿಜೆಪಿಯ ಸರ್ಕಾರ್ 2414 ಮತಗಳ ಅಂತರದಲ್ಲಿ ಸೋಲನುಭವಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News