ಪಡಿಕ್ಕಲ್ ಮದ್ರಸ ವಿದ್ಯಾರ್ಥಿಗಳಿಂದ ಮೀಲಾದ್ ಜಲ್ಸಾ ಕಾರ್ಯಕ್ರಮ

Update: 2019-11-30 06:53 GMT

ಉಳ್ಳಾಲ: ತನ್ವೀರುಲ್ ಇಸ್ಲಾಂ ಮದ್ರಸ ಪಡಿಕ್ಕಲ್ ಇಲ್ಲಿನ ಮದ್ರಸ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಮೀಲಾದ್ ಜಲ್ಸಾ ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮ ವನ್ನು ಉದ್ಘಾಟಿಸಿದ ಪಡಿಕಲ್ ಜುಮಾ ಮಸೀದಿ ಖತೀಬ್ ನಾಸಿರುದ್ದೀನ್ ಮದನಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. 

ಮುಅಲ್ಲಿಂ ಮಜೀದ್ ಮುಸ್ಲಿಯಾರ್ ಮೀಲಾದುನ್ನಬಿ ಬಗ್ಗೆ ಮಾತನಾಡಿದರು. ಉಪಾಧ್ಯಕ್ಷ ಅಬ್ಬು ಹಾಜಿ ಪಡಿಕಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಅಧ್ಯಕ್ಷ ಹಮೀದ್ ಇಂಜಿನಿಯರ್, ಗೌರವಾಧ್ಯಕ್ಷ  ಟಿ.ಕೆ.ಇಸ್ಮಾಯಿಲ್, ಕಾರ್ಯದರ್ಶಿ ಅಬ್ಬಾಸ್ ಬೆರೆ, ಮದ್ರಸ ಸಂಚಾಲಕ ಪಿ.ಎಸ್. ಇಸ್ಮಾಯಿಲ್, ಹಮೀದ್ ಗುದ್ರು  ಮೊದಲಾದವರು ಉಪಸ್ಥಿತರಿದ್ದರು.

ವಿಜೇತ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ಬಹುಮಾನ ವಿತರಿಸಲಾಯಿತು. ಉಳಿದ ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮನ ವಿತರಿಸಲಾಯಿತು. ತೀರ್ಪುಗಾರರಾಗಿ ನಾಸಿರ್ ಮಾಸ್ಟರ್ ಮತ್ತು ಅಬ್ಬಾಸ್ ಮುಸ್ಲಿಯಾರ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News