ಸಂವಿಧಾನದ ನಿಯಮ ಉಲ್ಲಂಘಿಸಿ ಅಧಿವೇಶನ ಕರೆಯಲಾಗಿದೆ :ಫಡ್ನವೀಸ್

Update: 2019-11-30 09:16 GMT

ಮುಂಬೈ, ನ.30: ಸಂವಿಧಾನದ ನಿಯಮಗಳನ್ನು ಉಲ್ಲಂಘಿಸಿ  ಅಧಿವೇಶನ ಕರೆಯಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಆರೋಪಿಸಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಲ್ಲಿ  ಇಂದು  ಮಾತನಾಡಿದ ಅವರು ವಿಧಾನಸಭೆಯ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ. 1 ಗಂಟೆಗೆ ಅಧಿವೇಶನ ಶಾಸಕರಿಗೆ ಆಹ್ವಾನ ನೀಡಲಾಗಿದೆ. ವಂದೇ ಮಾತರಂನೊಂದಿಗೆ ಅಧಿವೇಶನ ಆರಂಭವಾಗಿಲ್ಲ ಎಂದು ಹೇಳಿದರು.

ಹಂಗಾಮಿ  ಸ್ಪೀಕರ್ ದಿಲೀಪ್ ವಾಲ್ಸೆ ಪಾಟೀಲ್ ಅವರು ಫಡ್ನವೀಸ್ ಅವರ ಹೇಳಿಕೆಯನ್ನು ತಿರಸ್ಕರಿಸಿದರು, ರಾಜ್ಯಪಾಲರ ನಿರ್ದೇಶನದಂತೆ ಅಧಿವೇಶನ ನಡೆಯುತ್ತಿದೆ ಎಂದು ಹೇಳಿದರು. ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಶೀಘ್ರದಲ್ಲೇ ಮುಕ್ತ ಮತದಾನದ ಮೂಲಕ ವಿಶ್ವಾತ ಮತ ಯಾಚಿಸಲಿದೆ  ಎಂದರು.

ಸದನದಲ್ಲಿ ವಿಪಕ್ಷ ಬಿಜೆಪಿ ಸದಸ್ಯರು ಗದ್ದಲವನ್ನುಂಟು ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News