ಡಿ.3 ರಂದು ನೌಶಾದ್ ಬಾಖವಿ ಬೊಳ್ಳೂರಿಗೆ

Update: 2019-12-01 05:54 GMT

ಮುಲ್ಕಿ : ಶಂಸುಲ್ ಉಲಮಾ ಹಿಫ್ಳುಳ್ ಕುರ್ ಆನ್ ಕಾಲೇಜು ಬೊಳ್ಳೂರು ಹಳೆಯಂಗಡಿ  ಇದರ ಆಶ್ರಯದಲ್ಲಿ ಏಕದಿನ ಧಾರ್ಮಿಕ ಮತ ಪ್ರವಚನ  ಕಾರ್ಯಕ್ರಮವು  ಡಿ. 3ರಂದು ರಾತ್ರಿ 7 ಗಂಟೆಗೆ ಬೊಳ್ಳೂರಿನ ಶಂಸುಲ್ ಉಲಮಾ ನಗರ ಮೈದಾನದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಗೌರವಾದ್ಯಕ್ಷರಾದ ಅಲ್ ಹಾಜ್ ಮುಹಮ್ಮದ್ ಅಝ್ಹರ್ ಫೈಝಿ ಬೊಳ್ಳೂರು ಉಸ್ತಾದ್ ವಹಿಸಲಿದ್ದು, ಇರ್ಷಾದ್ ದಾರಿಮಿ ಅಲ್ ಜಝಾರಿ ಮಿತ್ತಬೈಲ್ ಉದ್ಘಾಟಿಸಲಿದ್ದಾರೆ. ಮಜ್ಲಿಸುನ್ನೂರ್ ನೇತೃತ್ವವನ್ನು  ಅಸೈಯ್ಯದ್ ಇಬ್ರಾಹಿಂ ಬಾತುಷಾ ತಂಙಳ್ ಆನೆಕಲ್ ವಹಿಸಲಿದ್ದಾರೆ. ಅಲ್ ಹಾಜಿ ಎಸ್.ಬಿ. ಮುಹಮ್ಮದ್ ದಾರಿಮಿ ಮುಲ್ಕಿ ಹಾಗೂ ಅಲ್ ಹಾಜ್ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಪ್ರಾಸ್ತಾವಿಕ  ಭಾಷಣ ಮಾಡಲಿದ್ದಾರೆ. 

ಸಮಾರಂಭದಲ್ಲಿ ಅಂತರ್ ರಾಷ್ಟ್ರೀಯ ಖ್ಯಾತಿಯ  ಎ.ಎಮ್. ನೌಶಾದ್ ಬಾಖವಿ  ತಿರುವನಂತಪುರ ಕೇರಳ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾಮಾಜಿಕ, ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಶಂಸುಲ್ ಉಲಮಾ ಹಿಫ್ಳುಳ್ ಕುರ್ ಆನ್ ಕಾಲೇಜಿನ ಗೌರವಾಧ್ಯಕ್ಷ ಬೊಳ್ಳೂರು ಉಸ್ತಾದ್  ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News