ಪರಿಯಾಲ್ತಡ್ಕದಲ್ಲಿ ಜಸ್ನ್-ಇ-ಮಿಲಾದುನ್ನಬಿ ಕಾರ್ಯಕ್ರಮ

Update: 2019-12-01 11:52 GMT

ವಿಟ್ಲ, ಡಿ. 1: ಪುಣಚ ಮಿಲಾದ್ ಸಮಿತಿ ಮತ್ತು ಎಪಿಎನ್ ವೆಲ್‍ಫೇರ್ ಅಸೋಸಿಯೇಶನ್ ಯುಎಇ ಆಶ್ರಯದಲ್ಲಿ ಜಸ್ನ್-ಇ-ಮಿಲಾದುನ್ನಬಿ ಕಾನ್ಫೆರೆನ್ಸ್ ಸೌಹಾರ್ದ ಸಮ್ಮೇಳನ ಪುಣಚ ಪರಿಯಾಲ್ತಡ್ಕ ಜಂಕ್ಷನ್‍ನಲ್ಲಿ ನಡೆಯಿತು.

ಕೇಮಾರು ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಿದರು. ಜಿಪಂ ಸದಸ್ಯ ಎಂ.ಎಸ್. ಮುಹಮ್ಮದ್ ಕಾರ್ಯಕ್ರಮ ಉದ್ಘಾಟಿಸಿದರು. ಮಿಲಾದ್ ಸಮಿತಿ ಸಂಚಾಲಕ ಬದ್ರುದ್ದೀನ್ ಪುಣಚ ಅಧ್ಯಕ್ಷತೆ ವಹಿಸಿದ್ದರು. ಹಾಫಿಲ್ ನಝೀರ್ ಅಹ್ಮದ್ ಕಿರಾಹತ್ ಪಠಿಸಿದರು.

ಈ ಸಂದರ್ಭದಲ್ಲಿ ಮಾಣಿಲ ಕ್ರಿಸ್ತ ಕಿಂಗ್ ದಿ ಚರ್ಚ್‍ನ ಪಾಹುಲ್ ಪ್ರಕಾಶ್ ಡಿಸೋಜ, ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅನಿಸ್ ಕೌಸರಿ, ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಹಾಫಿಲ್ ಯಾಕುಬ್ ಸಅದಿ ನಾವೂರು, ಮಂಗಳೂರು ಕ್ರಿಯೇಟಿವ್ ಫೌಂಡೇಶನ್‍ನ ಸದಸ್ಯ ಅನ್ವರ್ ಸಾದತ್ ಗೂಡಿನಬಳಿ, ಪರಿಯಾಲ್ತಡ್ಕ ಮಸೀದಿ ಖತೀಬ್ ಹಸೈನಾರ್ ಫೈಝೀ, ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಸಮಿತಿ ಉಪಾಧ್ಯಕ್ಷ ಮಾರಪ್ಪ ಶೆಟ್ಟಿ ಬೈಲುಗುತ್ತು, ಮಾಣಿಲ ಕ್ರಿಸ್ತ ಕಿಂಗ್ ದಿ ಚರ್ಚ್‍ನ ಉಪಾಧ್ಯಕ್ಷ ಅಂಬ್ರೋಸ್ ಮೊಂತೆರೋ, ಪುಣಚ ಗ್ರಾಪಂ ಉಪಾಧ್ಯಕ್ಷ ಮಹೇಶ್ ಶೆಟ್ಟಿ ಬೈಲುಗುತ್ತು, ಸದಸ್ಯ ಉದಯಕುಮಾರ್ ದಂಬೆ, ಯುಎಇ ವೆಲ್ಫೇರ್ ಅಸೋಸಿಯೇಶನ್‍ನ ಅಧ್ಯಕ್ಷ ಅಬೂಬಕರ್, ಶಫೀಕ್, ಅಬ್ದುಲ್ ರಝಾಕ್, ಶಾಫಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News