ಎಂದಿಗೂ ಹಿಂದುತ್ವವನ್ನು ತೊರೆಯುವುದಿಲ್ಲ: ಉದ್ಧವ್ ಠಾಕ್ರೆ

Update: 2019-12-01 12:56 GMT

ಹೊಸದಿಲ್ಲಿ, ಡಿ.1: ತಾನು ಎಂದೆಂದಿಗೂ ಹಿಂದುತ್ವವನ್ನು ತೊರೆಯುವುದಿಲ್ಲ ಮತ್ತು ದೇವೇಂದ್ರ ಫಡ್ನವೀಸ್ ತನ್ನ ಗೆಳೆಯನಾಗಿಯೇ ಉಳಿಯಲಿದ್ದಾರೆ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ.

"ನಾನು ಫಡ್ನವೀಸ್ ರಿಂದ ಹಲವು ವಿಷಯಗಳನ್ನು ಕಲಿತಿದ್ದೇನೆ ಮತ್ತು ಎಂದಿಗೂ ಅವರ ಸ್ನೇಹಿತನಾಗಿ ಇರಲಿದ್ದೇನೆ. ನಾನು ಹಿಂದುತ್ವ ಸಿದ್ಧಾಂತದೊಂದಿಗೆ ಇದ್ದೇನೆ ಮತ್ತು ಎಂದಿಗೂ ಅದನ್ನು ತೊರೆಯುವುದಿಲ್ಲ. ಕಳೆದ 5 ವರ್ಷಗಳಲ್ಲಿ ನಾನು ಎಂದು ಸರಕಾರಕ್ಕೆ ದ್ರೋಹ ಬಗೆದಿಲ್ಲ" ಎಂದು ಉದ್ಧವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News