ಗುಜರಾತ್ ನಿಂದ ದಿಲ್ಲಿಗೆ ಬಂದ ಮೋದಿ, ಅಮಿತ್ ಶಾ ವಲಸಿಗರು: ಅಧೀರ್ ರಂಜನ್ ಚೌಧರಿ

Update: 2019-12-01 17:15 GMT

ಹೊಸದಿಲ್ಲಿ: ಎನ್ ಆರ್ ಸಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಲೋಕಸಭೆಯ ವಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಗುಜರಾತ್ ನಿಂದ ದಿಲ್ಲಿಗೆ ಬಂದ ವಲಸಿಗರು ಎಂದಿದ್ದಾರೆ.

ಎನ್ ಆರ್ ಸಿ ಮೂಲಕ ಬಿಜೆಪಿಯು ಧಾರ್ಮಿಕ ವೈರುಧ್ಯಗಳನ್ನು ಸೃಷ್ಟಿಸುತ್ತಿದೆ ಎಂದ ಅವರು, "ಬಿಜೆಪಿ ಮುಸ್ಲಿಮರನ್ನು ದೇಶದಿಂದ ಹೊರಗಟ್ಟಲು ಬಯಸುತ್ತಿದೆ. ಆದರೆ ದೇಶದ ನಾಗರಿಕನಾಗಿರುವ ಒಬ್ಬ ಮುಸ್ಲಿಂ ಏಕೆ ದೇಶ ತೊರೆಯಬೇಕು?, ಈ ದೇಶ ಯಾರದಾದರೂ ಆಸ್ತಿಯೇ?, ಇದು ಎಲ್ಲರಿಗೂ ಸೇರಿದ ದೇಶ ಹಾಗು ಎಲ್ಲರಿಗೂ ಸಮಾನ ಹಕ್ಕಿದೆ?" ಎಂದರು.

"ಮೋದಿ ಮತ್ತು ಅಮಿತ್ ಶಾ ಇಬ್ಬರೂ ವಲಸಿಗರು ಎಂದು ನಾನು ಹೇಳಬಲ್ಲೆ. ಅವರು ತವರು ಗುಜರಾತ್. ಈಗ ಈ ಇಬ್ಬರೂ ದಿಲ್ಲಿಯಲ್ಲಿದ್ದಾರೆ. ಅವರು ಅಕ್ರಮ ಅಥವಾ ಸಕ್ರಮ ವಲಸಿಗರೇ" ಎಂದವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News