ಅಬುಧಾಬಿ : ರಾಕ್ ಕನ್ನಡ ರಾಜ್ಯೋತ್ಸವ, ಕನ್ನಡ ಸಂಘ ಸಮಿತಿ ರಚನೆ

Update: 2019-12-01 18:07 GMT

ಅಬುಧಾಬಿ :  ರಾಸ್ ಅಲ್ ಕೈಮಾದ ರಾಕ್ ಕನ್ನಡ ಸಂಘದ ವತಿಯಿಂದ ಪ್ರಥಮವಾಗಿ ಕರ್ನಾಟಕ ರಾಜ್ಯೋತ್ಸವ ಮತ್ತು ರಾಕ್ ಕನ್ನಡ ಸಂಘ ಸಮಿತಿ ರಚನೆ ಇತ್ತೀಚೆಗೆ ನಡೆಯಿತು.

ರಾಕ್ ಕನ್ನಡ ಸಂಘದ ಅಧ್ಯಕ್ಷ  ಡಾ.ಲೇಖಾ ತಮ್ಮಯ್ಯ ಕೊಡಗು ಅವರ ಅಧ್ಯಕ್ಷತೆಯಲ್ಲಿ  ಕಾರ್ಯಕ್ರಮ ನಡೆಯಿತು. ಈ ಸಂದರ್ಭ ರಾಕ್ ಕನ್ನಡ ಸಂಘದ ಉಪಾಧ್ಯಕ್ಷ ಸತ್ಯ ಕಾರ್ಯಪ್ಪ ಮತ್ತು ಸಮಿತಿ ಸದಸ್ಯರುಗಳಾದ ಕುಮಾರ್ ಬಟ್, ಫರ್ಹೀನ್, ಆಶಾ ಲಕ್ಷ್ಮಿ, ಮೌಶ್ಮಿ ಕಾರ್ಯಪ್ಪ, ಶ್ರೀಲತಾ, ಡಾ.ರಾಧಿಕಾ, ಅಮೃತ್ ತಮ್ಮಯ್ಯ, ಡಾ.ವಿವೇಕ್, ಡಾ.ಅನಿಲ್, ಉಮೇಶ್, ಮಹೇಶ್ ಪಾಟೀಲ್, ಅಕ್ಷತಾ, ಡಯಾನಾ, ಜಾನ್, ಡಾ. ಗಾಡ್ಫ್ರೆಡ್, ಸಂದೀಪ್, ಕ್ರಿಸ್ತಿ, ಡಾ.ಕವಿತಾ, ಜೇಷ್ಮ, ಪಲ್ಲವಿ, ನಾಗರಾಜ್, ಸಂಜನಾ, ಅನುಪಮಾ, ಹರೀಶ್, ರೋಹಿತ್, ಮಂಜು ಉಮೇಶ್ ಕಿಶೋರ್, ಹೇಮಾದ್ರಿ ಹಾಗು ಇತರರು ಉಪಸ್ಥಿತರಿದ್ದರು. ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News