ಅಪರಾಧರಹಿತ ಸಮಾಜ ನಿರ್ಮಿಸಲು ಶ್ರೀರಾಮನಿಗೂ ಅಸಾಧ್ಯ ಎಂದ ಉತ್ತರ ಪ್ರದೇಶದ ಸಚಿವ!

Update: 2019-12-05 17:24 GMT

ಹೊಸದಿಲ್ಲಿ: ಅತ್ಯಾಚಾರ ಸಂತ್ರಸ್ತೆಯೊಬ್ಬರಿಗೆ ದುಷ್ಕರ್ಮಿಗಳ ತಂಡವೊಂದು ಬೆಂಕಿ ಹಚ್ಚಿದ ಘಟನೆ ದೇಶಾದ್ಯಂತ ಆಕ್ರೋಶ ಸೃಷ್ಟಿಸಿರುವ ನಡುವೆಯೇ ಈ ಬ್ಗಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಸಚಿವ ರಾಘವೇಂದ್ರ ಪ್ರತಾಪ್ ಸಿಂಗ್ , "100 ಶೇ. ಅಪರಾಧ ರಹಿತ ಸಮಾಜ ನಿರ್ಮಿಸಲು ಶ್ರೀರಾಮನಿಂದಲೂ ಸಾಧ್ಯವಿಲ್ಲ" ಎಂದಿದ್ದಾರೆ.

"100 ಶೇ. ಅಪರಾಧರಹಿತ ಸಮಾಜ ಎಂದು ಹೇಳಲು ಶ್ರೀರಾಮನಿಂದಲೂ ಸಾಧ್ಯವಿಲ್ಲ ಎಂದು ನನಗನಿಸುತ್ತದೆ" ಎಂದು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News