ಕಾಂಗ್ರೆಸ್ ನ ಕೆಲವರ ದುರಹಂಕಾರದಿಂದ ಪಕ್ಷಕ್ಕೆ ಸೋಲಾಗಿದೆ -ಜನಾರ್ದನ ಪೂಜಾರಿ

Update: 2019-12-09 07:50 GMT

ಮಂಗಳೂರು : ಕಾಂಗ್ರೆಸ್ ನ ಕೆಲವರ ದುರಹಂಕಾರದಿಂದ ರಾಜ್ಯದ ಉಪ ಚುನಾವಣೆಯಲ್ಲಿ ಸೋಲಾಗಿದೆ. ಮತ್ತೆ ಗೆಲುವು ಸಾಧಿಸಬೇಕಾದರೆ ದುರಹಂಕಾರವನ್ನು ಕೆಲವು ನಾಯಕರು ಬಿಡಬೇಕು. ಜನರ ಅಭಿಪ್ರಾಯಗಳಿಗೆ ಬೆಲೆ ನೀಡಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಜರ್ನಾದನ ಪೂಜಾರಿ ರಾಜ್ಯದ ಉಪ ಚುನಾವಣೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಉಪ ಚುನಾವಣೆಯಲ್ಲಿ ನಾನು ಹೇಳಿದಂತೆ ಫಲಿತಾಂಶ ಬಂದಿದೆ. ಪಕ್ಷವನ್ನು ಸರಿಪಡಿಸಿ ತಪ್ಪುಗಳನ್ನು ತಿದ್ದಿಕೊಂಡು ಸರಿಮಾಡಿ ಹೋಗಿ ಎಂದು ಹೇಳಿದ್ದೇನೆ. ಅವರು ಗಮನ ಕೊಡಲಿಲ್ಲ. ಈಗ ಅನುಭವಿಸಬೇಕಾಗಿದೆ. ಇದೇ ರೀತಿ ಸಾಗಿದರೆ ಮತ್ತೆ ಬಿಜೆಪಿಯೇ ಜಯ ಸಾಧಿಸುತ್ತದೆ. ಜನರ ಮಾತಿಗೆ ಬೆಲೆ ನೀಡಿ ಪಕ್ಷ ಸಂಘಟಿಸಬೇಕಾಗಿದೆ ಎಂದು ಜನಾರ್ದನ ಪೂಜಾರಿ ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News