ವಿಕಲಚೇತನರ ಬಸ್ಪಾಸ್ ನವೀಕರಣ: ಅರ್ಜಿ ಆಹ್ವಾನ
Update: 2019-12-09 15:54 GMT
ಮಂಗಳೂರು, ಡಿ.9: ವಿಕಲಚೇತನ ಪ್ರಯಾಣಿಕರು ತಮ್ಮ ವಿಶೇಷ ಬಸ್ಪಾಸ್ನ ನವೀಕರಣಕ್ಕೆ ಕೆಎಸ್ಸಾರ್ಟಿಸಿಯಿಂದ ಅರ್ಜಿ ಆಹ್ವಾನಿಸಲಾಗಿದೆ.
ವಾಸಸ್ಥಳದಿಂದ 100 ಕಿ.ಮೀ ವ್ಯಾಪ್ತಿಯಲ್ಲಿ ಪ್ರಯಾಣಿಸಲು ರಿಯಾಯಿತಿ ದರದಲ್ಲಿ ಬಸ್ಪಾಸ್ ವಿತರಿಸಲಾಗುತ್ತಿದೆ. 2019ನೇ ಸಾಲಿನಲ್ಲಿ ವಿತರಿಸಿರುವ ರಿಯಾಯಿತಿ ಬಸ್ಪಾಸ್ ಅವಧಿಯು ಡಿ.31ರಂದು ಕೊನೆಗೊಳ್ಳಲಿದೆ. 2020ನೇ ಸಾಲಿಗಾಗಿ ಈ ಬಸ್ಪಾಸ್ಗಳನ್ನು 2020ರ ಜ.1ರಿಂದ ನವೀಕರಿಸಲು ಕ್ರಮ ಕೈಗೊಳ್ಳಲಾಗಿದ್ದು, ಹೊಸ ಪಾಸ್ಗಳನ್ನು ನೀಡಲಾಗುವುದು.
ವಿಕಲಚೇತನರ ರಿಯಾಯಿತಿ ಬಸ್ಪಾಸ್ಗಳನ್ನು ಫಲಾನುಭವಿಗಳು ಬಂದು ನವೀಕರಿಸಿಕೊಳ್ಳಲು ಅನುಕೂಲವಾಗುವಂತೆ ಸಾಕಷ್ಟು ಕಾಲಮಿತಿ ನೀಡುವ ಉದ್ದೇಶದಿಂದ 2019ನೇ ಸಾಲಿನಲ್ಲಿ ವಿತರಿಸಿದ ಪಾಸ್ಗಳನ್ನು ಫೆ.29ರವರೆಗೆ ಮಾನ್ಯತೆ ಮಾಡಲಾಗುತ್ತದೆ ಎಂದು ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟನೆ ತಿಳಿಸಿದೆ.