​ಬಾವಿಗೆ ಬಿದ್ದು ಮೃತ್ಯು

Update: 2019-12-09 16:06 GMT

ಅಜೆಕಾರು, ಡಿ.9: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಅಂಡಾರು ಗ್ರಾಮದ ಮುಟ್ಲುಪಾಡಿ ಶಾಲೆಯ ಬಳಿಯ ನಿವಾಸಿ ನಾರಾಯಣ ನಾಯ್ಕ (85) ಎಂಬವರು ಡಿ.7ರಂದು ರಾತ್ರಿ ಮನೆಯ ಸಮೀಪದ ಆವರಣವಿಲ್ಲದ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News