ರೈಲ್ವೇ ಕನ್ಸ್ ಲ್ಟೇಟಿವ್ ಸಮಿತಿ ಸದಸ್ಯರಾಗಿ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ನೇಮಕ

Update: 2019-12-12 13:07 GMT

ಕಾಸರಗೋಡು: ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅವರು ರೈಲ್ವೇ ಕನ್ಸ್ ಲ್ಟೇಟಿವ್ ಸಮಿತಿ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಕೇಂದ್ರ ರೈಲು ಸಚಿವ ಪೀಯೂಷ್ ಗೋಯಲ್ ಅವರು ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ.

ಸಮಿತಿಯಲ್ಲಿರುವ ಕೇರಳದ ಏಕಮಾತ್ರ ಪ್ರತಿನಿಧಿಯೂ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಆಗಿದ್ದಾರೆ. ಹಂತಹಂತವಾಗಿ ಸಂಸತ್ತಿನಲ್ಲಿ ರೈಲುಗಳ ನಿಲುಗಡೆ ಸಹಿತ ವಿವಿಧ ಅಭಿವೃದ್ಧಿ ವಿಚಾರಗಳಲ್ಲಿ ಧ್ವನಿ ಎತ್ತುತ್ತಿರುವ ತಾನು ಇನ್ನೂ ಈ ವಿಚಾರಗಳಲ್ಲಿ ಕಾಳಜಿ ವಹಿಸುವೆ ಎಂದು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ತಿಳಿಸಿದ್ದಾರೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News