ಆಲಾಡಿ: ಡಿ. 15ರಂದು ಸಾರ್ವಜನಿಕ ರಕ್ತದಾನ ಶಿಬಿರ

Update: 2019-12-12 17:30 GMT

ಬಂಟ್ವಾಳ, ಡಿ. 12: ಎಸ್ಡಿಪಿಐ ಬಂಟ್ವಾಳ ಕ್ಷೇತ್ರ ಸಮಿತಿ ವತಿಯಿಂದ ವೆನ್‍ಲಾಕ್ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ 2ನೇ ವರ್ಷದ ಪ್ರಯುಕ್ತ ಸಾರ್ವಜನಿಕ ರಕ್ತದಾನ ಶಿಬಿರವು ಡಿ. 15ರಂದು ಆಲಾಡಿಯ ಎನ್‍ಎಫ್‍ಸಿ ಕಚೇರಿಯಲ್ಲಿ ನಡೆಯಲಿದೆ.

ಎಸ್ಡಿಪಿಐ ಆಲಾಡಿಯ ಪ್ರಮುಖ ಶರೀಫ್ ಕೊಪ್ಪಲ ಅಧ್ಯಕ್ಷತೆ ವಹಿಸುವರು. ಬಂಟ್ವಾಳ ನಗರ ಠಾಣಾ ಎಸ್ಸೈ ಅವಿನಾಶ್, ಎಸ್ಡಿಪಿಐ ಕ್ಷೇತ್ರಾಧ್ಯಕ್ಷ ಯೂಸುಫ್ ಆಲಡ್ಕ, ಎಸ್ಡಿಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲಿಕ್ ಕೊಳಕೆ, ಪಿಎಫ್‍ಐ ವಯಲಾಧ್ಯಕ್ಷ ಖಾದರ್ ಆಲಾಡಿ, ಎಸ್ಡಿಪಿಐ ಗ್ರಾಮ ಸಮಿತಿ ಅಧ್ಯಕ್ಷ ಉಮರ್ ಫಾರೂಕ್, ಆಲಾಡಿ ಮಸೀದಿಯ ಖತೀಬ್ ರಿಯಾಝ್ ಫೈಝಿ, ಡಾ. ಹಸನಬ್ಬ, ಅಬ್ದುಲ್ ರಹಿಮಾನ್, ಹಮೀದ್ ಮಲ್ಪೆ, ಯೂಸುಫ್, ಯಾಕೂಬ್, ಮಜೀದ್ ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News