ಕಲ್ಲಡ್ಕ ಎಸ್ಕೆಎಸ್ಸೆಸ್ಸೆಫ್ ನಿಂದ ಡಿ.13ರಿಂದ ಮಜ್ಲಿಸುನ್ನೂರು, ಧಾರ್ಮಿಕ ಪ್ರವಚನ, ಕಥಾ ಪ್ರಸಂಗ
ವಿಟ್ಲ, ಡಿ.13: ಎಸ್ಕೆಎಸ್ಸೆಸ್ಸೆಫ್ ಕಲ್ಲಡ್ಕ ಶಾಖೆ ಹಾಗೂ ಗೋಳ್ತಮಜಲು ರಹ್ಮಾನಿಯ ಜುಮಾ ಮಸೀದಿಯ ವತಿಯಿಂದ ಮಜ್ಲಿಸುನ್ನೂರು, ಧಾರ್ಮಿಕ ಪ್ರವಚನ, ಹಾಗೂ ಕಥಾ ಪ್ರಸಂಗ ಕಾರ್ಯಕ್ರಮವು ಡಿ.13ರಿಂದ 15ರ ತನಕ ಗೋಳ್ತಮಜಲು ಸಂಶುಲ್ ಉಲಮಾ ನಗರದ ಮರ್ಹೂಂ ಜಬ್ಬಾರ್ ಉಸ್ತಾದ್ ವೇದಿಕೆಯಲ್ಲಿ ನಡೆಯಲಿದೆ.
ಡಿ. 13 ರಂದು ಮುಹಮ್ಮದ್ ಹನೀಫ್ ನಿಝಾಮಿ ಕಾಸರಗೋಡು ಇವರಿಂದ ದಾರ್ಮಿಕ ಪ್ರವಚನ, ಡಿ.14ರಂದು ಝುಬೈರ್ ಮಾಸ್ಟರ್ ತೊಟ್ಟಿಕ್ಕಲ್ ಮತ್ತು ತಂಡದವರಿಂದ 'ಮಿಸ್ರಿಲೆ ಪೂನಿಲಾವು' ಎಂಬ ವಿಷಯದಲ್ಲಿ ಕಥಾ ಪ್ರಸಂಗ ಡಿ.15ರಂದು ಸೈಯದ್ ನಜ್ಮುದ್ದೀನ್ ಪೂಕೋಯ ತಂಙಳ್ ಅಲ್ ಹೈದ್ರೋಸಿ ಅಲ್ ಯಮಾನಿ ನೇತೃತ್ವದಲ್ಲಿ ಮಜ್ಲಿಸುನ್ನೂರು ನಡೆಯಲಿದೆ.
ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾಧ್ಯಕ್ಷ ಖಾಸಿಂ ದಾರಿಮಿ ಕಿನ್ಯ, ಶೇಖ್ ಮುಹಮ್ಮದ್. ಇರ್ಫಾನಿ ಫೈಝಿ ಅಲ್ ಅಝ್ಹರಿ, ಇರ್ಶಾದ್ ದಾರಿಮಿ ಅಲ್ ಜಝರಿ ಮಿತ್ತಬೈಲ್, ಯಹ್ಯಾ ದಾರಿಮಿ ಗೋಳ್ತಮಜಲು, ಅಬ್ದುಲ್ ಹಮೀದ್ ದಾರಿಮಿ ಕೆ.ಸಿ.ರೋಡ್, ಬಿ.ಟಿ.ಇಕ್ಬಾಲ್ ದಾರಿಮಿ ಕಲ್ಲಡ್ಕ, ಜಿ.ಎಂ.ಅಬ್ದುಲ್ಲ ಫೈಝಿ, ಹಾಜಿ ಜಿ.ಅಬೂಬಕರ್ ಗೋಳ್ತಮಜಲು, ಹಾಜಿ ಕೆ.ಎಸ್.ಇಸ್ಮಾಯೀಲ್ ಕಲ್ಲಡ್ಕ, ಹಾಜಿ ಕೆ.ಅಬ್ದುಲ್ ಹಮೀದ್ ಗೋಲ್ಡನ್, ಹಾಜಿ ಜಿ.ಮುಹಮ್ಮದ್ ಹನೀಫ್ ಗೋಳ್ತಮಜಲು, ಪಿ.ಬಿ.ಬಶೀರ್ ಕೆ.ಸಿ.ರೋಡ್, ಹಾಜಿ ಜಿ.ಯೂಸುಫ್ ಗೋಳ್ತಮಜಲು ಹಾಗೂ ಎಸ್ಕೆಎಸ್ಸೆಸ್ಸೆಫ್ ಕಲ್ಲಡ್ಕ ಶಾಖಾದ್ಯಕ್ಷ ಮುಹಮ್ಮದ್ ಇಕ್ಬಾಲ್ ಸಹಿತ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದು ಕೋಶಾಧಿಕಾರಿ ನಿಹಾನ್ ಮುಹಮ್ಮದ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.