ಕುಂದಾಪುರ: ಡಿ.15ರಂದು ಬ್ಲಡ್ ಹೆಲ್ಪ್ ಕೇರ್ ವತಿಯಿಂದ 50ನೇ ರಕ್ತದಾನ ಶಿಬಿರ

Update: 2019-12-13 11:43 GMT

ಮಂಗಳೂರು, ಡಿ.13: ರಕ್ತದಾನಿಗಳ ಉತ್ತೇಜನೆ, ರಕ್ತದಾನದ ಬಗ್ಗೆ ಜಾಗೃತಿ ಹಾಗೂ ರಕ್ತದ ಅವಶ್ಯಕತೆಯಿರುವ ರೋಗಿಗಳಿಗೆ ಅಗತ್ಯವಿರುವ ಸೂಕ್ತ ಗುಂಪಿನ ರಕ್ತವನ್ನು ಕ್ಲಪ್ತ ಸಮಯದಲ್ಲಿ ಪೂರೈಸುವ ಸದುದ್ದೇಶದಿಂದ ಸ್ಥಾಪಿಸಲಾದ ಬ್ಲಡ್ ಹೆಲ್ಪ್ ಕೇರ್, ಕರ್ನಾಟಕ ಸಂಸ್ಥೆಯು ತನ್ನ ಐವತ್ತನೇ ರಕ್ತದಾನ ಶಿಬಿರವನ್ನು ಕುಂದಾಪುರದಲ್ಲಿ ಆಯೋಜಿಸಿದೆ. ಈ ಮೂಲಕ ಒಂದೂವರೆ ವರ್ಷಗಳ ಅವಧಿಯಲ್ಲಿ ವಿವಿಧೆಡೆ ಯಶಸ್ವೀ ಐವತ್ತು ರಕ್ತದಾನ ಶಿಬಿರಗಳನ್ನು ಏರ್ಪಡಿಸಿದ ಖ್ಯಾತಿಗೆ ಒಳಗಾಗಿದೆ.

ಡಿಸೆಂಬರ್ 15ರಂದು ಕುಂದಾಪುರದ ಬೋರ್ಡ್ ಹೈಸ್ಕೂಲಿನ ಶ್ರೀ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ರೆಡ್ ಕ್ರಾಸ್ ರಕ್ತನಿಧಿ ಕುಂದಾಪುರ ಇದರ ಸಹಯೋಗದೊಂದಿಗೆ ರಕ್ತದಾನ ಶಿಬಿರ ಕಾರ್ಯಕ್ರಮ ನಡೆಯಲಿದೆ. ಸಮಾರಂಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮನೋರಂಜನಾ ಕಾರ್ಯಕ್ರಮಗಳು ಜರುಗಲಿವೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News