ಹಳೆಯಂಗಡಿ: ಬೃಹತ್ ಬುರ್ದಾ ಮಜ್ಲಿಸ್ ಕಾರ್ಯಕ್ರಮ

Update: 2019-12-18 18:37 GMT

ಹಳೆಯಂಗಡಿ, ಡಿ.18: ಬದ್ರಿಯಾ ಜುಮಾ ಮಸೀದಿ ಹಾಗೂ ಎಸ್ಸೆಸೆಫ್ ಸಾಗ್ ಶಾಖೆಯ ವತಿಯಿಂದ ತಾಜುಲ್ ಉಲಮಾ ಅನುಸ್ಮರಣೆ ಹಾಗೂ ಬೃಹತ್ ಬುರ್ದಾ ಮಜ್ಲಿಸ್ ಕಾರ್ಯಕ್ರಮವು ಸಾಗ್ ಬದ್ರಿಯಾ  ಜುಮಾ ಮಸೀದಿಯ ವಠಾರದಲ್ಲಿ ಮಂಗಳವಾರ ರಾತ್ರಿ ನಡೆಯಿತು. 

ಬುರ್ದಾ ಮಜ್ಲಿಸ್ ನ ನೇತೃತ್ವವನ್ನು ತ್ವಾಹಾ ತಂಙಳ್ ವಹಿಸಿದ್ದರು.

ಅಬ್ದುರಹ್ಮಾನ್ ಕುಡುಂಬೂರು ಅಧ್ಯಕ್ಷತೆ ವಹಿಸಿದ್ದರು. ಬದ್ರಿಯಾ ಜುಮಾ‌ ಮಸೀದಿಯ ಖತೀಬ್ ಇ.ಎಂ. ಅಬ್ದುಲ್ಲಾ ಮದನಿ ಮುಖ್ಯ ಭಾಷಣಗೈದರು.  ಇಬ್ರಾಹಿಂ ಮದನಿ ತಾಜುಲ್ ಉಲಮಾ ಅವರ ಅನುಸ್ಮರಣೆಯ ಸಂದೇಶ ಭಾಷಣ ಮಾಡಿದರು. ಮೀರಾಜ್ ತಂಙಳ್ ದುವಾ ನೆರವೇರಿಸಿದರು.

ಸಮಾರಂಭದಲ್ಲಿ ಹಳೆಯಂಗಡಿ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಶಾಹುಲ್ ಹಮೀದ್, ಅಬ್ದುಲ್ ರಝಾಕ್ ಮೂಡುತೋಟ ಸಾಗ್, ಹಮೀದ್ ಮುಸ್ಲಿಯಾರ್, ಅಬ್ದುಲ್ ರಹ್ಮಾನ್ ಮದನಿ, ಶುಕೂರ್ ಇರ್ಫಾನ್, ಶಹೀನ್ ಬಾಬು, ಫಾರೂಕ್ ಸಾಗ್, ಶಮೀಮ್ ಸಾಗ್, ಎಂ.ಎಚ್. ಮುಸ್ತಫಾ ಸಾಗ್, ಉಬೈದುಲ್ಲಾ ಸಾಗ್, ಅಬ್ದುಲ್ ಖಾದರ್, ಸ್ವಾಲೀಹ್ ಸಾಗ್, ಅಕ್ಬರ್ , ಶಮೀಮ್, ಎಂ.ಎಚ್. ಅಬ್ದುಲ್ ಸಲಾಮ್, ಅಬ್ದುಲ್ ಖಾದರ್ ಕಜಕತೋಟ, ಹನೀಫ್ ಸಾಗ್, ರಕೀನ್, ಸಾಅದ್, ಹಮೀದ್ , ಬಶೀರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News