ನಾಳೆ ಪೇಜಾವರಶ್ರೀಗಳಿಗೆ ಉಡುಪಿ ಜನತೆಯ ಶೃದ್ದಾಂಜಲಿ ಸಭೆ

Update: 2020-01-01 18:38 GMT

ಉಡುಪಿ, ಜ.1: ಎಂಟು ದಶಕಗಳ ಕಾಲ ಯತಿಶ್ರೇಷ್ಠರಾಗಿ ಯತಿಧರ್ಮಕ್ಕೆ ಹೊಸ ಭಾಷ್ಯ ಬರೆದು ಸಮಾಜದ ಎಲ್ಲಾ ವರ್ಗಗಳ ಜನರಿಂದಲೂ ಗೌರವಾದರಕ್ಕೆ ಪಾತ್ರರಾಗಿ ಡಿ.29ರಂದು ಅಸ್ತಂಗತರಾದ ಪೇಜಾವರ ಮಠದ ಶ್ರೀವಿಶ್ವೇಶತೀರ್ಥರಿಗೆ ಉಡುಪಿ ಸಮಸ್ತ ಜನತೆಯ ಪರವಾಗಿ ಶೃದ್ದಾಂಜಲಿ ಸಭೆ ಜ.4ರ ಶನಿವಾರ ಸಂಜೆ 6:00ಗಂಟೆಗೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ.

ಪರ್ಯಾಯ ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ನಡೆಯುವ ಈ ನುಡಿನಮನದಲ್ಲಿ ನಾಡಿನ ಎಲ್ಲಾ ವರ್ಗಗಳ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಉಡುಪಿಯ ವಿವಿಧ ಸಂಘಸಂಸ್ಥೆ ಗಳ ಸದಸ್ಯರು ಹಾಗೂ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News