ಮೃತ ಅಗ್ನಿಶಾಮಕ ಸಿಬ್ಬಂದಿಯ ಕುಟುಂಬಕ್ಕೆ ಒಂದು ಕೋ.ರೂ.ಪರಿಹಾರ
Update: 2020-01-02 18:15 GMT
ಹೊಸದಿಲ್ಲಿ,ಜ.2:ಪಶ್ಚಿಮ ದಿಲ್ಲಿಯ ಪೀರಾ ಗಡಿಯ ಬ್ಯಾಟರಿ ಗೋದಾಮಿನಲ್ಲಿ ಬೆಂಕಿ ಆರಿಸುವ ಕಾರ್ಯಾಚರಣೆ ಸಂದರ್ಭ ಮೃತಪಟ್ಟಿರುವ ಅಗ್ನಿಶಾಮಕ ದಳದ ಸಿಬ್ಬಂದಿ ಅಮಿತ್ ಬಲಿಯಾನ್ (29) ಅವರ ಕುಟುಂಬಕ್ಕೆ ಒಂದು ಕೋಟಿ ರೂ.ಪರಿಹಾರವನ್ನು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಘೋಷಿಸಿದ್ದಾರೆ.
ಕಳೆದ ವರ್ಷದ ಜೂ.10ರಂದು ಅಗ್ನಿಶಾಮಕ ಸೇವೆಗೆ ಸೇರಿದ್ದ ಬಲಿಯಾನ್ ಕಟ್ಟಡ ಕುಸಿದಾಗ ಅವಶೇಷಗಳಡಿ ಸಿಕ್ಕಿಹಾಕಿಕೊಂಡಿದ್ದು,ಆರು ಗಂಟೆಗಳ ಸತತ ಕಾರ್ಯಾಚರಣೆಯ ಬಳಿಕ ಅವರ ಶವ ಪತ್ತೆಯಾಗಿತ್ತು.
ಬಲಿಯಾನ್ ಅಂತ್ಯಸಂಸ್ಕಾರ ಶುಕ್ರವಾರ ನಡೆಯಲಿದೆ.