ಅಂಗನವಾಡಿ ಕಾರ್ಯಕರ್ತೆಯರ-ಸಹಾಯಕಿಯರ ಸಂಘದ ವಾರ್ಷಿಕೋತ್ಸವ
Update: 2020-01-02 18:20 GMT
ಮಂಗಳೂರು, ಜ.2: ದ.ಕ.ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ-ಸಹಾಯಕಿಯರ ಸಂಘದ ವಾರ್ಷಿಕೋತ್ಸವವು ನಗರದ ಎನ್ ಜಿ ಒ ಹಾಲ್ನಲ್ಲಿ ಇತ್ತೀಚೆಗೆ ಜರುಗಿತು.
ಮಂಗಳೂರು ತಾಲೂಕು ಕಸಾಪ ಅಧ್ಯಕ್ಷೆ ವಿಜಯಲಕ್ಷ್ಮಿ ಬಿ. ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಗಳಾಗಿ ಶಾಂಭವಿ ಜಯರಾಮ, ಚಂಚಲಾ ತೇಜೊಮಯ ಭಾಗವಹಿಸಿದ್ದರು.
ಸಂಘದ ರಾಜ್ಯಾಧ್ಯಕ್ಷೆ ಜಯಲಕ್ಷ್ಮಿ ಬಿ.ಆರ್., ಜಿಲ್ಲಾ ಕಾರ್ಯದರ್ಶಿ ಚಂದ್ರಾವತಿ, ಗ್ರಾಮಾಂತರ ಅಧ್ಯಕ್ಷೆ ಸುನೀತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿಯರಾದ ಪೂರ್ಣಿಮಾ, ಜಯಶ್ರೀ ಪವಾರ್ ಪಾಲ್ಗೊಂಡಿದ್ದರು.
ಇಲಾಖೆಯ ಹಿರಿಯ ಮೇಲ್ವಿಚಾರಕಿ ಸುಧಾ ಮಾಹಿತಿ ನೀಡಿದರು. ಬಾನುಮತಿ ಸ್ವಾಗತಿಸಿದರು. ಭವಾನಿ ನಾಗೇಶ್ ವರದಿ ವಾಚಿಸಿದರು. ಸುಜಾತಾ ರೈ ವಂದಿಸಿದರು. ವಿಶಾಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು.