ಉಳ್ಳಾಲ ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿ ಯುವ ಉದ್ಯಮಿ ಆತ್ಮಹತ್ಯೆ

Update: 2020-01-03 14:34 GMT

ಉಳ್ಳಾಲ: ಯುವ ಯುದ್ಯಮಿಯೊಬ್ಬರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದ್ದು, ಮೃತದೇಹಕ್ಕಾಗಿ ಕಾಯಾಚರಣೆ ನಡೆದ ಬಳಿಕ ಕೋಟೆಪುರ ಬಳಿ ಮೃತದೇಹ ದೊರೆತಿದೆ. 

ಕುತ್ತಾರ್ ನ ಮಹಾಬಲ ಕೊಟ್ಟಾರಿ ಪುತ್ರ ನವೀಶ್ ಕೊಟ್ಟಾರಿ(28) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಪ್ರಸಕ್ತ ಉಳ್ಳಾಲಬೈಲ್‍ನಲ್ಲಿ ವಾಸವಿರುವ ಅವರು ರಾಣಿಪುರ ಬಳಿ ಶಾಮಿಯಾನ ಅಂಗಡಿ ಮತ್ತು ನೀರಿನ ಟ್ಯಾಂಕರ್ ಹೊಂದಿದ್ದರು. ಶುಕ್ರವಾರ ಬೆಳಗಿನ ಜಾವ ಬೈಕ್‍ನಲ್ಲಿ ತೆರಳಿದ ಅವರು ನೇತ್ರಾವತಿ ಸೇತುವೆ ಬಳಿ ಬೈಕ್ ನಿಲ್ಲಿಸಿ ನದಿಗೆ ಹಾರಿದ್ದಾರೆ. ಆರ್ಥಿಕ ಮುಗ್ಗಟ್ಟಿನಿಂದ ನೊಂದು ಅವರು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ.

ಅವಿವಾಹಿತರಾಗಿರುವ ನವೀಶ್ ತಂದೆ ತಾಯಿ ಮತ್ತು ಇಬ್ಬರು ಸಹೋದರರನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News