​ಸರ ಕಳವಿಗೆ ಯತ್ನಿಸುತ್ತಿದ್ದ ಇಬ್ಬರು ಮಹಿಳೆಯರ ಬಂಧನ

Update: 2020-01-04 17:03 GMT

ಗಂಗೊಳ್ಳಿ, ಜ.4: ಮರವಂತೆಯ ರಾಮ ಮಂದಿರದಲ್ಲಿ ಅಯ್ಯಪ್ಪ ಸ್ವಾಮಿ ಊಟದ ಸಂದರ್ಭದಲ್ಲಿ ಸರ ಕಳವಿಗೆ ಯತ್ನಿಸುತ್ತಿದ್ದ ಇಬ್ಬರು ಮಹಿಳೆಯರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ಮಧ್ಯಾಹ್ನ ವೇಳೆ ನಡೆದಿದೆ.

ಬಂಧಿತರನ್ನು ಲಕ್ಷ್ಮೀ(38) ಹಾಗೂ ಸುಧಾ(30) ಎಂದು ಗುರುತಿಸಲಾಗಿದೆ. ಅಲೆಮಾರಿಯಾಗಿರುವ ಇವರು ಮಂಗಳೂರು ಬಿ.ಸಿ.ರೋಡ್‌ನಲ್ಲಿ ವಾಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಇವರು ರಾಮಮಂದಿರದಲ್ಲಿ ಊಟದ ಸಂದರ್ಭ ಜನಜಂಗುಳಿಯಲ್ಲಿ ಭಕ್ತರ ಸರ ಕಳವಿಗೆ ಯತ್ನಿಸುತ್ತಿದ್ದ ವೇಳೆ ಸಾರ್ವಜನಿಕವಾಗಿ ಸಿಕ್ಕಿಬಿದ್ದರು. ಗಂಗೊಳ್ಳಿ ಪೊಲೀಸರು ಇವರನ್ನು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News