ನಮ್ಮ ದೇಶವನ್ನು ಕಟ್ಟಿದ ಅಡಿಪಾಯ ಇದಲ್ಲ: ದೀಪಿಕಾ ಪಡುಕೋಣೆ

Update: 2020-01-08 11:12 GMT

ಹೊಸದಿಲ್ಲಿ: ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿದಾಗ ತನಗೆ ಸಿಟ್ಟು ಬರುತ್ತದೆ ಎಂದು ನಟಿ ದೀಪಿಕಾ ಪಡುಕೋಣೆ ಹೇಳಿದ್ದಾರೆ.

"ನಾನು ಹೇಳಬೇಕಾಗಿದ್ದನ್ನು ಎರಡು ವರ್ಷಗಳ ಹಿಂದೆಯೇ 'ಪದ್ಮಾವತ್' ಬಿಡುಗಡೆ ಸಂದರ್ಭ ಹೇಳಿದ್ದೆ. ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿದಾಗ ಬಹಳ ನೋವಾಗುತ್ತದೆ. ಯಾರು ಕೂಡ ಏನನ್ನು ಬೇಕಾದರೂ ಹೇಳುವುದು ಹಾಗೂ ಮಾಡುವುದು ಹಾಗೂ ನಂತರ ತಪ್ಪಿಸಿಕೊಳ್ಳುವುದು, ಇದು ಹೊಸ ನಾರ್ಮಲ್ ಆಗದೇ ಇರಲಿ ಎಂದು ಆಶಿಸುತ್ತೇನೆ. ನನಗೆ ಭಯವೂ ಆಗುತ್ತದೆ, ಆತಂಕವೂ ಆಗುತ್ತದೆ. ನಮ್ಮ ದೇಶವನ್ನು ಕಟ್ಟಿದ ಆಧಾರಸ್ಥಂಭ ಇದಲ್ಲ. ನಮ್ಮ ದೇಶದಲ್ಲೇನಾಗುತ್ತಿದೆ  ಎಂದು ಸಿಟ್ಟು ಕೂಡ ಬರುತ್ತಿದೆ. ಆದರೆ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂಬ ವಾಸ್ತವದ ಕುರಿತಂತೆ ನಾವೆಲ್ಲ ಯೋಚಿಸಬೇಕಾಗಿದೆ'' ಎಂದು ಇಂಡಿಯಾ ಟುಡೆ ಜತೆ ಮಾತನಾಡುತ್ತಾ ದೀಪಿಕಾ ಹೇಳಿದ್ದಾರೆ.

ಮಂಗಳವಾರ ರಾತ್ರಿ ಜೆಎನ್‍ಯುವಿಗೆ ತೆರಳಿ ಅಲ್ಲಿ ರವಿವಾರದ ದಾಳಿಯ ವಿರುದ್ಧ ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳ ಜತೆ ನಿಂತು ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದ ದೀಪಿಕಾ ಎಲ್ಲೆಡೆಯಿಂದ ಪ್ರಶಂಸೆ ಗಿಟ್ಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News