ಆರೆಸ್ಸೆಸ್ ಕೇಂದ್ರದಲ್ಲೇ ಬಿಜೆಪಿಗೆ ಮುಖಭಂಗ: ಕಾಂಗ್ರೆಸ್-ಎನ್ ಸಿಪಿ -ಶಿವಸೇನೆ ಪರಾಕ್ರಮ

Update: 2020-01-08 15:16 GMT

ಮುಂಬೈ: ಮಹಾರಾಷ್ಟ್ರದಲ್ಲಿ ಅಧಿಕಾರದಿಂದ ಬಿಜೆಪಿಯನ್ನು ಹೊರಗಿಟ್ಟು ಕಾಂಗ್ರೆಸ್-ಎನ್ ಸಿಪಿ ಮತ್ತು ಶಿವಸೇನೆ ಸರಕಾರ ಸ್ಥಾಪಿಸಿದ ಒಂದು ತಿಂಗಳ ನಂತರ ಇದೀಗ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಈ ಮೈತ್ರಿ ಮತ್ತೊಮ್ಮೆ ಗೆಲುವಿನ ನಗೆ ಬೀರಿದೆ. ಮೂರೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿತ್ತು.

ವಿಶೇಷವೆಂದರೆ ಆರೆಸ್ಸೆಸ್ ನ ಕೇಂದ್ರವಾದ ನಾಗ್ಪುರದಲ್ಲಿ ಕಾಂಗ್ರೆಸ್ 30 ಸೀಟುಗಳನ್ನು ತನ್ನದಾಗಿಸಿಕೊಂಡಿದೆ. ಆದರೆ ಬಿಜೆಪಿ 15 ಸೀಟುಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿದೆ. ಇದೇ ವೇಳೆ ಎನ್ ಸಿಪಿ ಮತ್ತು ಶಿವಸೇನೆ 11  ಮತ್ತು 1 ಕ್ಷೇತ್ರಗಳಲ್ಲಿ ಗೆದ್ದಿದೆ.

ವಶೀಮ್ ನಲ್ಲಿ ಎನ್ ಸಿಪಿ 12 ಸೀಟುಗಳನ್ನು ಗೆದ್ದರೆ, ಬಿಜೆಪಿ 7 ಸೀಟುಗಳನ್ನು ಗೆದ್ದಿದೆ. ಪಾಲ್ಘರ್ ನಲ್ಲಿ ಶಿವಸೇನೆ 18 ಸ್ಥಾನಗಳನ್ನು ಗೆದ್ದಿದೆ. ಧುಲೆಯಲ್ಲಿ ಬಿಜೆಪಿ 39 ಸೀಟುಗಳನ್ನು ಗೆದ್ದರೆ, ನಂದರ್ಬಾರ್ ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ 23 ಸೀಟುಗಳನ್ನು ಗೆದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News