ಜ. 12: ಕೃಷ್ಣಾಪುರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ

Update: 2020-01-09 13:07 GMT

ಕೃಷ್ಣಾಪುರ: ಸಂವಿಧಾನ ರಕ್ಷಣಾ ಸಮಿತಿ ಸುರತ್ಕಲ್ ಇದರ ವತಿಯಿಂದ ಜ.12ರಂದು ಮಧ್ಯಾಹ್ನ 2ಗಂಟೆಗೆ  ಕೃಷ್ಣಾಪುರ ಪ್ಯಾರಡೈಸ್ ಮೈದಾನದಲ್ಲಿ ಪ್ರತಿಭಟನಾ ಸಮಾವೇಶ ನಡೆಯಲಿದೆ.

ಈ ಸಮಾವೇಶದ ಪ್ರಯುಕ್ತ  ಸುರತ್ಕಲ್, ಕೃಷ್ಣಾಪುರ, ಇಡ್ಯಾ, ಕಾಟಿಪಳ್ಳ, ಕಾನ, ಚೊಕ್ಕಬೆಟ್ಟು, ಪಣಂಬೂರು, ಅಂಗರಗುಂಡಿ, ಮಂಗಳಪೇಟೆ, ಕುಳಾಯಿ, ಹಳೆಯಂಗಡಿ, ಕಿನ್ನಿಗೋಳಿ, ಮುಕ್ಕ, ಬೈಕಂಪಾಡಿ, ಜೋಕಟ್ಟೆ  ಹಾಗೂ ಇತರ ಎಲ್ಲಾ ಸ್ಥಳೀಯ ಪರಿಸರದ ಚಿಂತಕರು, ಬುದ್ಧಿಜೀವಿಗಳು, ವರ್ತಕರು, ಶಿಕ್ಷಕರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು, ಚಾಲಕರು ಮತ್ತು ನಾಗರಿಕರು ಸಹಕರಿಸಬೇಕಾಗಿ ಸಂವಿಧಾನ ರಕ್ಷಣಾ ಸಮಿತಿ ಕೃಷ್ಣಾಪುರ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News