ಕೆಸಿಎಫ್ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ

Update: 2020-01-11 16:43 GMT

ದುಬೈ : ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಇದರ ಯುಎಇ ರಾಷ್ಟ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಮತ್ತು ದುಬೈ ನೋರ್ತ್ ಝೋನ್ ಇದರ ಸದಸ್ಯರಾದ ಕಲಂದರ್ ಕಬಕ ಅವರು ವೃತ್ತಿ ನಿಮಿತ್ತ ಬೇರೆ ದೇಶಕ್ಕೆ ಪ್ರಯಾಣಿಸುತ್ತಿದ್ದು,  ಈ ನಿಟ್ಟಿನಲ್ಲಿ ಕೆಸಿಎಫ್ ದುಬೈ ನೋರ್ತ್ ಝೋನ್ ವತಿಯಿಂದ ಸನ್ಮಾನಿಸಿ, ಬೀಳ್ಕೊಡಲಾಯಿತು.

ಕೆಸಿಎಫ್ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಇಬ್ರಾಹಿಂ ಮದನಿ ಉಸ್ತಾದ್ ಹೊರ್ ಅಲ್ ಆನ್ಝ್  ಅವರು ಶಾಲು ಹೊದಿಸಿ ಸನ್ಮಾನಿಸಿ ಶುಭಹಾರೈಸಿದರು. ದುಬೈ ನೋರ್ತ್ ಝೋನ್ ಕ್ಯಾಬಿನೆಟ್ ಆ್ಯಂಡ್ ಎಕ್ಷಿಕ್ಯೂಟಿವ್ ಮಟ್ಟದ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಮೊದಲು ಕಲಂದರ್ ಕಬಕ ಸೆಕ್ಟರ್ ಕಾರ್ಯದರ್ಶಿಯಾಗಿ, ನಂತರ ಝೋನ್ ಮಟ್ಟದ ಕಾರ್ಯದರ್ಶಿಯಾಗಿ,  ಪ್ರಸ್ತುತ ರಾಷ್ಟ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯಾಗಿ ಆಗಿ ಸೇವೆ ಸಲ್ಲಿಸಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News