ಉಡುಪಿ : ಜಿಲ್ಲಾ ಮಟ್ಟದ ಹೊಯ್ಸಳ ಪ್ರಶಸ್ತಿಗೆ ಪ್ರಥಮ್ ಕಾಮತ್ ಆಯ್ಕೆ

Update: 2020-01-12 17:01 GMT

ಶಿರ್ವ, ಜ.12: ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಕೊಡಲ್ಪಡುವ 2019-20ನೆ ಸಾಲಿನ ಜಿಲ್ಲಾ ಮಟ್ಟದಲ್ಲಿ ಅಸಾಧಾರಣ ಸಾಧನೆ ಮಾಡಿದ ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಕ್ಕಳಿಗೆ ನೀಡುವ ಹೊಯ್ಸಳ ಪ್ರಶಸ್ತಿಗೆ ಕಟಪಾಡಿ ಎಸ್‌ವಿಎಸ್ ಆಂಗ್ಲ ಮಾಧ್ಯಮ ಶಾಲಾ 8ನೇ ತರಗತಿಯ ವಿದ್ಯಾರ್ಥಿ ಪ್ರಥಮ್ ಕಾಮತ್ ಆಯ್ಕೆಯಾಗಿದ್ದಾರೆ.

ಚಿತ್ರಕಲೆ, ಕ್ರಾಪ್ಟ್, ಕ್ಲೇ ಮಾಡೆಲಿಂಗ್, ಮ್ಯಾಜಿಕ್, ಅಭಿನಯದಲ್ಲಿ ಸಾಧನೆ ಮಾಡಿರುವ ಪ್ರಥಮ್, ದೃಶ್ಯ ಸ್ಕೂಲ್ ಆಪ್ ಆರ್ಟ್ಸ್‌ನಲ್ಲಿ ಚಿತ್ರಕಲೆ, ಕ್ರಾಪ್ಟ್ ಕಲಿಯುತ್ತಿದ್ದು, ಖ್ಯಾತ ಕಲಾವಿದ ವೆಂಕಿ ಪಲಿಮಾರ್‌ರವರಲ್ಲಿ ಕ್ಲೇ ಮಾಡೆಲಿಂಗ್, ಮ್ಯಾಜಿಸಿಯನ್ ಸತೀಶ್ ಹೆಮ್ಮಾಡಿ ಅವರಲ್ಲಿ ಮ್ಯಾಜಿಕ್ ಕಲೆಯನ್ನು ಅಭ್ಯಾಸ ಮಾಡುತ್ತಿದ್ದಾರೆ.

ಜ.26ರಂದು ಜರಗುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇವರು ಮೂರುಮುತ್ತು ಖ್ಯಾತಿಯ ಬಹು ಭಾಷಾರಂಗ ಕಲಾವಿದ ಕೆ.ನಾಗೇಶ ಕಾಮತ್ ಹಾಗೂ ಸುಜಾತಾ ದಂಪತಿಗಳ ಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News