ಕಾಞಂಗಾಡ್: ದೇವಾಲಯದಿಂದ ಚಿನ್ನದ ಕಿರೀಟ ಸಹಿತ ಭಾರೀ ನಗನಗದು ಕಳವು

Update: 2020-01-14 06:45 GMT

ಕಾಸರಗೋಡು, ಜ.14: ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ಭಾರೀ ಪ್ರಮಾಣದ ನಗನಗದು ಕಳವುಗೈದ ಘಟನೆ ಕಾಞಂಗಾಡ್‌ನಲ್ಲಿ ನಡೆದಿದೆ.

ಕಾಞಂಗಾಡ್ ಕಡಿಂಞತ್ತೂರು ಶ್ರೀ ಮಹಾವಿಷ್ಣು ದೇವಾಲಯದಿಂದ ಕಳವು ನಡೆದಿದ್ದು, ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಬೆಳಗ್ಗೆ ಅರ್ಚಕರು ಪೂಜೆ ಸಲ್ಲಿಸಲು ತಲಪಿದಾಗ ಕೃತ್ಯ ಬೆಳಕಿಗೆ ಬಂದಿದೆ. ದೇಗುಲದ ಹಿಂಬದಿಯ ಮಾಡಿನ ಹಂಚು ತೆಗೆದು ಒಳನುಗ್ಗಿರುವ ಕಳ್ಳರು ದೇವರ ವಿಗ್ರಹಕ್ಕೆ ಸಮರ್ಪಿಸಿದ್ದ ಚಿನ್ನದ ಕಿರೀಟ ಸೇರಿದಂತೆ 20 ಪವನ್ ಆಭರಣ ಕಳವು ಮಾಡಿದ್ದಾರೆ.

ಕಾಣಿಕೆ ಡಬ್ಬಿಯನ್ನು ಒಡೆದು ಅದರಲ್ಲಿ ಹಣವನ್ನು ದೋಚಿದ್ದಾರೆ.

ಪೊಲೀಸರು ಸ್ಥಳಕ್ಕೆ ತಲುಪಿದ್ದು ತನಿಖೆ ನಡೆಸುತ್ತಿದ್ದಾರೆ. ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಆರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News