ಬೈಕ್ ಢಿಕ್ಕಿ: ಪಾದಚಾರಿ ಮಹಿಳೆ ಮೃತ್ಯು

Update: 2020-01-14 15:41 GMT

ಬ್ರಹ್ಮಾವರ, ಜ.14: ಉಪ್ಪೂರಿನಲ್ಲಿರುವ ಪ್ರವೀಣ್ ಜನರಲ್ ಸ್ಟೋರ್ ಎದುರು ಜ.13ರಂದು ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟಲು ನಿಂತಿದ್ದ ಮಹಿಳೆಯೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ಸ್ಥಳೀಯರಾದ ಗುಲಾಬಿ ಬಂಗೇರ(53) ಎಂದು ಗುರುತಿಸ ಲಾಗಿದೆ. ಕೆ.ಜಿ.ರೋಡ್ ಕಡೆಯಿಂದ ಕೊಳಲಗಿರಿ ಕಡೆಗೆ ಹೋಗುತ್ತಿದ್ದ ಟಿವಿಎಸ್ ವಿಕ್ಟರ್ ಬೈಕ್ ಸವಾರ ಕೀರ್ತನ್ ಕುಮಾರ್, ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ಬಂದು ರಸ್ತೆ ದಾಟಲು ನಿಂತಿದ್ದ ಗುಲಾಬಿ ಬಂಗೇರ ಅವರಿಗೆ ಢಿಕ್ಕಿ ಹೊಡೆದನು.

ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಗುಲಾಬಿ, ಮಣಿಪಾಲದ ಆಸ್ಪತ್ರೆಗೆ ಕರೆದುಕೊಂಡು ಹೋಗುವಾರ ದಾರಿ ಮಧ್ಯೆ ಮೃತ ಪಟ್ಟರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News