ಸಮುದಾಯೋತ್ಸವ: ಆಮ್ಚಾ ಸಂದೇಶ್ ವಿಶೇಷ ಸಂಚಿಕೆ ಬಿಡುಗಡೆ
Update: 2020-01-18 15:13 GMT
ಉಡುಪಿ, ಜ.18: ಕೆಥೊಲಿಕ್ ಉಡುಪಿ ಪ್ರದೇಶ್ ವತಿಯಿಂದ ಜ.19 ರಂದು ನಡೆಯಲಿರುವ ಉಡುಪಿ ಧರ್ಮಪ್ರಾಂತ ಮಟ್ಟದ ಸಮ್ಮೇಳನ ಸಮುದಾಯೋತ್ಸವ-2020 ಇದರ ಪ್ರಯುಕ್ತ ಹೊರತರಲಾದ ಆಮ್ಚಾ ಸಂದೇಶ್ ವಿಶೇಷ ಪುರವಣಿಯನ್ನು ಹಿರಿಯ ಪತ್ರಕರ್ತ ಶಶಿಧರ ಮಾಸ್ತಿಬೈಲು ಇಂದು ಬಿಡುಗಡೆಗೊಳಿಸಿದರು.
ಯಾವುದೇ ಸಂಘಟನೆಯ ವಿಚಾರಗಳು ದಾಖಲಿಕರಣಗೊಂಡಾಗ ಅದು ಮುಂದಿನ ಪೀಳಿಗೆಗೆ ನೆನಪಾಗಿ ಉಳಿಯಲು ಸಹಕಾರಿಯಾಗುತ್ತದೆ. ಸಂಘಟನೆ ಗಳು ಬೆಳೆದು ಬಂದ ದಾರಿ ಸಮಾಜದ ಮುಂದಿನ ಪೀಳಿಗೆಗೆ ತಲುಪಿಸಲು ದಾಖಲೀಕರಣ ಉತ್ತಮ ದಾರಿಯಾಗಿದೆ ಎಂು ಶಶಿಧರ ಮಾಸ್ತಿಬೈಲು ತಿಳಿಸಿದರು.
ಈ ಸಂದರ್ಭದಲ್ಲಿ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ನಿಕಟಪೂರ್ವ ಅಧ್ಯಕ್ಷ ವಲೇರಿಯನ್ ಫೆರ್ನಾಂಡಿಸ್, ಮಾಜಿ ಅಧ್ಯಕ್ಷ ವಾಲ್ಟರ್ ಸಿರಿಲ್ ಪಿಂಟೊ, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್ ಉಪಸ್ಥಿತರಿದ್ದರು.