ಮರಣ ಪತ್ರ ಬರೆದಿಟ್ಟು ತೀರ್ಥಹಳ್ಳಿಯ ವಿದ್ಯಾರ್ಥಿನಿ ಆತ್ಮಹತ್ಯೆ
Update: 2020-01-18 16:35 GMT
ಉಡುಪಿ, ಜ.18: ಬೀಡಿನಗುಡ್ಡೆಯಲ್ಲಿರುವ ಖಾಸಗಿ ಹಾಸ್ಟೆಲ್ನಲ್ಲಿ ತೀರ್ಥ ಹಳ್ಳಿಯ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜ.17ರಂದು ರಾತ್ರಿ ವೇಳೆ ನಡೆದಿದೆ.
ಮೃತರನ್ನು ತೀರ್ಥಹಳ್ಳಿಯ ಬಾಳಗಾರು ನಿವಾಸಿ, ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಅಂತಿಮ ಬಿಎಸ್ಸಿ ವಿದ್ಯಾರ್ಥಿನಿ ವೀಕ್ಷಿತಾ(20) ಎಂದು ಗುರುತಿಸ ಲಾಗಿದೆ. ಈಕೆ ಮರಣ ಪತ್ರ ಬರೆದಿಟ್ಟಿದ್ದು, ಇದರಲ್ಲಿ ತೀರ್ಥಹಳ್ಳಿಯ ಕಿರಣ್ ಎಂಬಾತ ಈಕೆಗೆ ಮೋಸ ಮಾಡಿರುವುದಾಗಿ ಮತ್ತು ಫೋನ್ ಮಾಡಿ ಮಾನಸಿಕ ಹಿಂಸೆ ನೀಡುತ್ತಿರುವುದಾಗಿ ಬರೆಯಲಾಗಿದೆ.
ಅದರಂತೆ ತೀರ್ಥಹಳ್ಳಿಯ ಕಿರಣ್ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳ ಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.