ಉಳ್ಳಾಲ: ನೇತ್ರಾವತಿ ನದಿಯಲ್ಲಿ ದೋಣಿ ಮಗುಚಿ ಬಿದ್ದು ಯುವತಿ ಮೃತ್ಯು

Update: 2020-01-19 14:47 GMT

ಉಳ್ಳಾಲ: ನೇತ್ರಾವತಿ ನದಿಯಲ್ಲಿ ದೋಣಿ ಮಗುಚಿ ಬಿದ್ದ ಪರಿಣಾಮ ಕಾಲೇಜು ವಿದ್ಯಾರ್ಥಿನಿ ನೀರಿನಲ್ಲಿ ಮುಳುಗಿ ಮೃತಪಟ್ಟ  ಘಟನೆ ರವಿವಾರ ಸಂಭವಿಸಿದೆ.

ಮೃತ ವಿದ್ಯಾರ್ಥಿನಿಯನ್ನು ಮೀಯಪದವು ನಿವಾಸಿ ರೆನಿಟಾ (18) ಎಂದು ಗುರುತಿಸಲಾಗಿದೆ.

ಆರು ಮಂದಿ ದೋಣಿಯಲ್ಲಿ ಹೋಗುತ್ತಿದ್ದ ಸಂದರ್ಭ ಮಂಗಳೂರು ನೇತ್ರಾವತಿ ನದಿ ತೀರದಲ್ಲಿ ವಿಪರೀತ ಗಾಳಿ ಬೀಸಿದ ಪರಿಣಾಮ ಆಯ ತಪ್ಪಿ ದೋಣಿ ಮಗುಚಿ ಬಿದ್ದು ಈ ದುರ್ಘಟನೆ ನಡೆದಿದೆ. ದೋಣಿಯಲಿದ್ದ ಇನ್ನೊಬ್ಬ ಯುವತಿ ಗುಲ್ಬರ್ಗ ನಿವಾಸಿ ಕಾವ್ಯ (20) ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ತೊಕ್ಕೊಟ್ಟು ಸಂತ ಸೆಬೆಸ್ಟಿಯನ್ ಚಚ್ ನ ವಾರ್ಷಿಕೋತ್ಸವಕ್ಕೆಂದು  ಸಂಬಂಧಿಕರಾದ ಉಳಿಯ ನಿವಾಸಿ ಜಾರ್ಜ್ ಅವರ ಮನೆಗೆ   ಬಂದಿದ್ದ ಆರು ಮಂದಿ ಯುವತಿಯರು ದೋಣಿಯಲ್ಲಿ  ಹೋಗುತ್ತಿದ್ದಾಗ ದೋಣಿ ಮಗುಚಿ ಬಿದ್ದು ವಿದ್ಯಾರ್ಥಿನಿ ರೆನಿಟಾ ಮೃತರಾಗಿದ್ದಾರೆ.

ಈ  ಸಂದರ್ಭ ಸ್ಥಳೀಯರು ಇತರರನ್ನು ರಕ್ಷಣೆ ಮಾಡಿದ್ದು, ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News