ಮಂಗಳೂರು : ಎಂಡೋಸಲ್ಫಾನ್ ಸಂತ್ರಸ್ತರ ಪಾಲನ ಕೇಂದ್ರಗಳಿಗೆ ಜಂಟಿ ನಿರ್ದೇಶಕರು ಭೇಟಿ

Update: 2020-01-20 06:22 GMT

ಮಂಗಳೂರು : ದ.ಕ ಜಿಲ್ಲೆಯಲ್ಲಿ ಕಾರ್ಯಚರಿಸುತ್ತಿರುವ ಎಂಡೋಸಲ್ಫಾನ್ ಸಂತ್ರಸ್ತರ ಪಾಲನ ಕೇಂದ್ರ ಕೊಯಿಲ, ಕೊಕ್ಕಡ ಹಾಗೂ ಕೌಶಲ್ಯ ತರಬೇತಿ ಕೇಂದ್ರ ಉಜಿರೆ ಇಲ್ಲಿಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯ ಬೆಂಗಳೂರು ಇಲ್ಲಿನ ಜಂಟಿ ನಿರ್ದೇಶಕರಾದ  ಡಾ. ಪ್ರಕಾಶ್ ಕುಮಾರ್ ಬಿ.ಜಿ  ಭೇಟಿ ನೀಡಿದರು.

ಈ ಸಂದರ್ಭ ಕೇಂದ್ರದ ಚಟುವಟಿಕೆ ಕುರಿತು ಪರಿಶೀಲನೆ ನಡೆಸಿದರು ಹಾಗೂ ಈ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ನಂತರ ಮಾರ್ಗದರ್ಶನ ನೀಡಿದರು.

ತಂಡದಲ್ಲಿ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಕಾರ್ಯಕ್ರಮದ ಜಿಲ್ಲಾ ನೊಡಲ್ ಅಧಿಕಾರಿ ಡಾ ನವೀನ್ ಚಂದ್ರ, ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಕಾರ್ಯಕ್ರಮದ ಜಿಲ್ಲಾ ಸಂಯೋಜಕರಾದ ಸಜಿವುದ್ದೀನ್ ಎಂ.ಎಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News