ಜ. 22ರಿಂದ ಮಂಜನಾಡಿಯಲ್ಲಿ ದ್ಸಿಕ್ರ್ ವಾರ್ಷಿಕ ಕಾರ್ಯಕ್ರಮ

Update: 2020-01-20 08:04 GMT

ಉಳ್ಳಾಲ : ಮಂಜನಾಡಿ ಜುಮಾ ಮಸೀದಿಯಲ್ಲಿ ವಾರಪ್ರತಿ ನಡೆಸಿಕೊಂಡು ಬರುತ್ತಿರುವ ದ್ಸಿಕ್ರ್‌ ಹಲ್ಕಾದ 34ನೇ ವಾರ್ಷಿಕ ಕಾರ್ಯಕ್ರಮವು ಜ.22ರಿಂದ 26ರ ರವರೆಗೆ ಮಸೀದಿಯ ಗೌರವಾಧ್ಯಕ್ಷ ಕೆ.ಎಸ್. ಆಟಕೋಯ ತಂಙಳ್‌ರವರ ದುವಾ ಆಶೀರ್ವಚನದೊಂದಿಗೆ ಮಂಜನಾಡಿ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ.

ಜ.22ರಂದು ದ್ಸಿಕ್ರ್ ವಾರ್ಷಿಕ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ಜ.26ರಂದು ಸಮಾರೋಪ ಕಾರ್ಯಕ್ರಮ ನಡೆಯಲಿದೆ. ಆಲಿಕುಂಞಿ ಉಸ್ತಾದ್ ದ್ಸಿಕ್ರ್ ಮಜ್ಲಿಸ್ ನೇತೃತ್ವ ವಹಿಸಲಿದ್ದಾರೆ. ಈ ಸಂದರ್ಭ ಬಸ್ತಾನುಲ್ ಉಲೂಂ ದರ್ಸ್ ವಿದ್ಯಾರ್ಥಿಗಳಿಂದ ಬುರ್ದಾ ಮಜ್ಲಿಸ್ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News