ಉಡುಪಿ ಜಿಲ್ಲೆಯಲ್ಲಿ ಎ.15ರಿಂದ ಜನಗಣತಿ: ಜಿಲ್ಲಾಧಿಕಾರಿ ಜಗದೀಶ್

Update: 2020-01-24 14:56 GMT

ಉಡುಪಿ, ಜ.24: ದೇಶದ ಜನಗಣತಿಯ ಅಂಗವಾಗಿ ಜಿಲ್ಲೆಯಲ್ಲಿ ಎಪ್ರಿಲ್ 15ರಿಂದ ಮೇ 29ರವರೆಗೆ ಮನೆಗಳ ಜನಗಣತಿ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜನಗಣತಿ ಕುರಿತ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಈ ಬಾರಿಯ ಜನಗಣತಿಯಲ್ಲಿ ಗಣತಿ ಅಧಿಕಾರಿಗಳು ಮುದ್ರಿತ ಪೇಪರ್‌ನಲ್ಲಿ ಹಾಗೂ ಮೊಬೈಲ್ ಅಪ್ಲಿಕೇಶನ್ ಹೀಗೆ ಎರಡು ರೀತಿಯಲ್ಲಿ ಜನಗಣತಿ ನಡೆಸಲಿದ್ದು, ಮೊಬೈಲ್ ಅಪ್ಲಿಕೇಶನ್‌ನಲ್ಲಿ ದಾಖಲಿಸುವುದರಿಂದ ವಿವರಗಳು ಶೀಘ್ರವಾಗಿ ದೊರೆಯಲಿದೆ ಎಂದವರು ತಿಳಿಸಿದರು.

ಇದರ ಆಯ್ಕೆ ಗಣತಿ ಅಧಿಕಾರಿಗಳಿಗೆ ನೀಡಿದ್ದು, ಒಬ್ಬ ಗಣತಿದಾರರು ಪ್ರತಿ ದಿನ 150ರಿಂದ 180 ಮನೆಗಳ ಗಣತಿ ಮಾಡಲಿದ್ದು, ಒಟ್ಟಾರೆಯಾಗಿ 650 ರಿಂದ 800 ಜನರ ಗಣತಿ ಮಾಡಲಿದ್ದಾರೆ. ಗಣತಿದಾರರಿಗೆ ನಿಗದಿತ ಪ್ರದೇಶ ಗಳ ವಿಂಗಡಣೆ ಮಾಡಲಿದ್ದು, ಜಿಲ್ಲೆಯಲ್ಲಿ ಈಗಾಗಲೇ 2 ಮಂದಿ ಮಾಸ್ಟರ್ ತರಬೇತುದಾರರಿಗೆ ಗಣತಿ ಕಾರ್ಯದ ಬಗ್ಗೆ ತರಬೇತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಗಣತಿ ಸಂದರ್ಭದಲ್ಲಿ ನಾಗರಿಕರಿಂದ ಪಡೆಯುವ ಮಾಹಿತಿಗಳಲ್ಲಿ ಗೌಪ್ಯತೆ ಯನ್ನು ಕಾಯ್ದುಕೊಳ್ಳಲಾಗುವುದು. ಗಣತಿ ಸಂದರ್ಭದಲ್ಲಿ ನಾಗರಿಕರಿಂದ ಯಾವುದೇ ದಾಖಲೆ ಅಥವಾ ಪ್ರಮಾಣಪತ್ರಗಳನ್ನು ಪಡೆಯಲಾಗುವುದಿಲ್ಲ. ಹಾಗೂ ಬಯೋಮೆಟ್ರಿಕ್ ಸಂಗ್ರಹ ಕೂಡ ಮಾಡುವುದಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ಪಷ್ಟಪಡಿಸಿದರು.

ಜಿಲ್ಲೆಯಲ್ಲಿ ಗಣತಿ ಕಾರ್ಯಕ್ಕಾಗಿ 2194 ಗಣತಿದಾರರು ಹಾಗೂ 356 ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದ್ದು, ಇವರಿಗೆ ಶೀಘ್ರದಲ್ಲಿ ಸಮಗ್ರ ತರಬೇತಿ ನೀಡಲಾಗುವುದು ಎಂದ ಜಿಲ್ಲಾಧಿಕಾರಿ, ಗಣತಿ ಕಾರ್ಯವನ್ನು ನಿಗದಿತ ಅವಧಿಯೊಳಗೆ ಮುಕ್ತಾಯಗೊಳಿಸಬೇಕಿದ್ದು, ಗಣತಿಯ ಅವಧಿಯ ವಿಸ್ತರಣೆ ಆಗುವುದಿಲ್ಲ. ಆದ್ದರಿಂದ ಗಣತಿ ಕಾರ್ಯಕ್ಕೆ ನಿಯೋಜಿಸಿರುವ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ನಿಗದಿತ ಅವಧಿಯಲ್ಲಿ ಗಣತಿ ಕಾರ್ಯವನ್ನು ವುುಕ್ತಾಯಗೊಳಿಸುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಗಣತಿ ಕಾರ್ಯಕ್ಕಾಗಿ 2194 ಗಣತಿದಾರರು ಹಾಗೂ 356 ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದ್ದು, ಇವರಿಗೆ ಶೀಘ್ರದಲ್ಲಿ ಸಮಗ್ರ ತರಬೇತಿ ನೀಡಲಾಗುವುದು ಎಂದ ಜಿಲ್ಲಾಧಿಕಾರಿ, ಗಣತಿ ಕಾರ್ಯವನ್ನು ನಿಗದಿತ ಅವಧಿಯೊಳಗೆ ಮುಕ್ತಾಯಗೊಳಿಸಬೇಕಿದ್ದು, ಗಣತಿಯ ಅವಧಿಯ ವಿಸ್ತರಣೆ ಆಗುವುದಿಲ್ಲ. ಆದ್ದರಿಂದ ಗಣತಿ ಕಾರ್ಯಕ್ಕೆ ನಿಯೋಜಿಸಿರುವ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ನಿಗದಿತ ಅವಧಿಯಲ್ಲಿ ಗಣತಿ ಕಾರ್ಯವನ್ನು ಮುಕ್ತಾಯಗೊಳಿಸುವಂತೆ ತಿಳಿಸಿದರು. ಜನಗಣತಿ ಕುರಿತು ಜಿಲ್ಲಾ ನೋಡೆಲ್ ಅಧಿಕಾರಿ ಪ್ರಮೇಶ್‌ಚಂದ್ರ ಬಾಬು ಮಾತನಾಡಿ, ದೇಶದಲ್ಲಿ 1872ರಿಂದ ಜನಗಣತಿ ನಡೆಯುತ್ತಿದ್ದು, ಪ್ರಸ್ತುತ 2021ರ ಜನಗಣತಿಯು ದೇಶದ 16ನೆಯ ಹಾಗೂ ಸ್ವಾತಂತ್ರಾ ನಂತರದ 8ನೇ ಜನಗಣತಿಯಾಗಿದೆ. ಭಾರತದ ಜನಗಣತಿ ವಿಧಾನವು ವಿಶ್ವದ ಅತ್ಯುತ್ತಮ ಜನಗಣತಿ ವಿಧಾನ ಎಂದು ಪರಿಗಣಿತವಾಗಿದ್ದು, ಜನಗಣತಿ ಕಾಯ್ದೆಯಡಿ ಈ ಜನಗಣತಿ ನಡೆಯುತ್ತಿದೆ ಎಂದು ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಜಿಪಂ ಉಪಕಾರ್ಯದರ್ಶಿ ಕಿರಣ್ ಪಡ್ನೇಕರ್, ಡಿಡಿಪಿಐ ಶೇಷಶಯನ ಕಾರಿಂಜ, ಪೌರಾಯುಕ್ತ ಆನಂದ್ ಕಲ್ಲೋಳಿಕರ್ ಹಾಗೂ ಜಿಲ್ಲೆಯ ಎಲ್ಲಾ ತಹಶೀಲ್ದಾರ್‌ಗಳು ಉಪಸ್ಥಿತರಿದ್ದರು.

ಮುಖ್ಯಾಂಶಗಳು

*ಎ.15ರಿಂದ ಮೇ 29ರವರೆಗೆ ಜನಗಣತಿ
*ಗಣತಿಗೆ 2194 ಣತಿದಾರರು, 356 ಮೇಲ್ವಿಚಾರಕರು
*ಗಣತಿಗೆ 2194 ಗಣತಿದಾರರು, 356 ಮೇಲ್ವಿಚಾರಕರು
*ದಾಖಲೆಗಳನ್ನು ಕೇಳುವುದಿಲ್ಲ, ಬಯೋಮೆಟ್ರಿಕ್ ಸಂಗ್ರಹವಿಲ್ಲ
*ಪಡೆದ ಮಾಹಿತಿಗಳ ಗೌಪ್ಯತೆ ಕಾಯ್ದುಕೊಳ್ಳಲಾಗುವುದು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News