ಉಡುಪಿ ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷರಾಗಿ ದಾವೂದ್ ಅಬೂಬಕರ್ ನೇಮಕ

Update: 2020-01-24 15:41 GMT
ದಾವೂದ್

ಉಡುಪಿ, ಜ.24: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು ಮಂಗಳವಾರ ಉಡುಪಿ ಜಿಲ್ಲಾ ವಕ್ಫ್ ಸಲಹಾ ಮಂಡಳಿಗೆ ಉಡುಪಿಯ ದಾವೂದ್ ಅಬೂಬಕರ್ ಅವರನ್ನು ಅಧ್ಯರನ್ನಾಗಿ ನಾಮನಿರ್ದೇಶನ ಮಾಡಿದೆ.

ಉಡುಪಿಯ ಜುನೈದ್ ಉಸ್ಮಾನ್ ಅಲಿ ಮತ್ತು ಮನ್ಸೂರ್ ಅಲಿ ಅವರನ್ನು ಸಮಿತಿಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಸರಕಾರವು ರಾಜ್ಯಾ ದ್ಯಂತ 23 ಜಿಲ್ಲೆಗಳಲ್ಲಿ ವಕ್ಫ್ ಸಲಹಾ ಮಂಡಳಿಯನ್ನು ನೇಮಕ ಮಾಡಿ ಪಟ್ಟಿ ಯನ್ನು ಬಿಡುಗಡೆಗೊಳಿಸಿದೆ. ದಾವೂದ್ ಅಬೂಬಕರ್ ಉಡುಪಿ ನಗರ ಬಿಜೆಪಿ ಅಧ್ಯಕ್ಷರಾಗಿದ್ದು, ರೋಟರಿ ಕ್ಲಬ್ ಉಡುಪಿ ರಾಯಲ್ ಇದರ ಸದಸ್ಯರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News