ಫೆ.1ಕ್ಕೆ ಚಡಗ ಪ್ರಶಸ್ತಿ ಪ್ರದಾನ

Update: 2020-01-24 16:58 GMT

ಉಡುಪಿ, ಜ.24: ಕೋಟೇಶ್ವರದ ಎನ್.ಆರ್.ಎ.ಎಂ.ಎಚ್ ಪ್ರಕಾಶನದಿಂದ ನೀಡಲಾಗುವ ಪಾಂಡೇಶ್ವರ ಸೂರ್ಯನಾರಾಯಣ ಚಡಗ ಸ್ಮಾರಕ ಪ್ರಶಸ್ತಿ ಪ್ರದಾನ ಹಾಗೂ ಕೃತಿ ಬಿಡುಗಡೆ ಸಮಾರಂಭ ಫೆ.1ರ  ಸಂಜೆ 4 ಗಂಟೆಗೆ ಕೋಟದ ಕ.ಸಾ.ಪ. ಉಡುಪಿ ಜಿಲ್ಲಾ ಕಚೇರಿ ಆವರಣದಲ್ಲಿ ನಡೆಯಲಿದೆ.

ಬೆಂಗಳೂರಿನ ಸಹನಾ ವಿಜಯಕುಮಾರ್ ಅವರ ‘ಕಶೀರ’ ಕೃತಿ ಈ ಬಾರಿಯ ಚಡಗ ಸ್ಮಾರಕ ಪ್ರಶಸ್ತಿಗೆ ಆಯ್ಕೆಯಾಗಿದೆ. ಅಲ್ಲದೇ ಸಮಾರಂಭದಲ್ಲಿ ಡಾ.ಭಾಸ್ಕರ ಆಚಾರ್ಯ (ಆರ್ಚಿ) ಅವರ ‘ವ್ಯವಸ್ಥೆ’ ಹಾಗೂ ವಿದ್ವಾನ್ ಯು. ಪದ್ಮನಾಭ ಭಟ್ ಅವರ ‘ನೀವು ಪುರುಷರೇ, ಪುರುಷ ಪಶುಗಳೇ?’ ಕೃತಿಗಳು ಬಿಡುಗಡೆಗೊಳ್ಳಲಿವೆ.

ಖ್ಯಾತ ಲೇಖಕ ಹಾಗೂ ಚಿಂತಕ ಕನರಾಡಿ ವಾದಿರಾಜ ಭಟ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಲೇಖಕ ಪ್ರೊ.ಉಪೇಂದ್ರ ಸೋಮಯಾಜಿ, ಶೇಷನಾರಾಯಣ ಚಡಗ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ಪ್ರಶಸ್ತಿ ಸಮಿತಿಯ ಸಂಚಾಲಕಿ, ಲೇಖಕಿ ಕೆ.ಶಾರದಾ ಭಟ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News