ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಜಾರ್ಜ್ ಫೆರ್ನಾಂಡಿಸ್ ರಿಗೆ 'ಪದ್ಮ ವಿಭೂಷಣ'

Update: 2020-01-25 16:46 GMT

ಹೊಸದಿಲ್ಲಿ: ಮಾಜಿ ಕೇಂದ್ರ ಸಚಿವರಾದ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಮತ್ತು ಜಾರ್ಜ್ ಫೆರ್ನಾಂಡಿಸ್ ಅವರನ್ನು ಈ ಬಾರಿ ದೇಶದ 2ನೆ ಅತ್ಯುನ್ನತ ಪ್ರಶಸ್ತಿಯಾದ 'ಪದ್ಮ ವಿಭೂಷಣ' ಗೌರವಕ್ಕೆ ಆಯ್ಕೆ ಮಾಡಲಾಗಿದೆ.

ಮನೋಹರ್ ಪಾರಿಕ್ಕರ್ ರಿಗೆ ಪದ್ಮ ಭೂಷಣ ಗೌರವ ನೀಡಲಾಗಿದೆ.

ಬಾಕ್ಸರ್ ಮೇರಿ ಕೋಮ್ ರನ್ನು ಪದ್ಮ ವಿಭೂಷಣ, ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರನ್ನು ಪದ್ಮ ಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕರಣ್ ಜೋಹರ್, ಏಕ್ತಾ ಕಪೂರ್, ಕಂಗನಾ ರಾಣವತ್ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಉದ್ಯಮಿ ಆನಂದ್ ಮಹೀಂದ್ರಾ ಮತ್ತು ವೇಣು ಶ್ರೀನಿವಾಸನ್ ಪದ್ಮ ಭೂಷಣ ಗೌರವಕ್ಕೆ ಆಯ್ಕೆಯಾಗಿದ್ದಾರೆ.

ಮಾರಿಷಸ್ ಪ್ರಧಾನಿ ಅನೆರೂಡ್ ಗುಗನೌತ್- ಪದ್ಮವಿಭೂಷಣ

ನಾಗಾಲ್ಯಾಂಡ್ ಮಾಜಿ ಸಿಎಂ ಎಸ್ ಸಿ ಜಾಮಿರ್- ಪದ್ಮ ಭೂಷಣ

ಮುಝಫ್ಫರ್ ಹುಸೈನ್ ಬೇಗ್ - ಪದ್ಮಭೂಷಣ

'ನೌಕ್ರಿ ಡಾಟ್ ಕಾಂ' ಸ್ಥಾಪಕ ಸಂಜೀವ್ - ಪದ್ಮಶ್ರೀ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News