ಪುಂಜಾಲಕಟ್ಟೆ: ಎಸ್ಡಿಪಿಐ ವತಿಯಿಂದ ಗಣರಾಜ್ಯೋತ್ಸವ

Update: 2020-01-26 09:21 GMT

ಪುಂಜಾಲಕಟ್ಟೆ: ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುಂಜಾಲಕಟ್ಟೆ ವಲಯ ವತಿಯಿಂದ ಗಣರಾಜ್ಯೋತ್ಸವ ಪ್ರಯುಕ್ತ ಗಣರಾಜ್ಯವನ್ನು ಉಳಿಸಿ ಕಾರ್ಯಕ್ರಮವು ಪುಂಜಾಲಕಟ್ಟೆ ಜಂಕ್ಷನ್ ನಲ್ಲಿ ನಡೆಯಿತು.

ಮಚ್ಚಿನ ಪಂಚಾಯತ್ ಸದಸ್ಯ ಇಕ್ಬಾಲ್ ಬಂಗೇರುಕಟ್ಟೆ ಧ್ವಜಾರೋಹಣಗೈದರು.  ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ತಾಲೂಕು ಕಾರ್ಯದರ್ಶಿ ತ್ವಾಹಿರ್ ಪುಂಜಾಲಕಟ್ಟೆ ಸಂದೇಶ ಭಾಷಣ ಮಾಡಿದರು. ಉಸ್ಮಾನ್ ವೇಣೂರು ಸಂವಿಧಾನ ಪೀಠಿಕೆ ಓದಿಸಿದರು.

ಕಾರ್ಯಕ್ರಮದಲ್ಲಿ ಪಿಎಫ್ಐ ಡಿವಿಷನ್ ಅಧ್ಯಕ್ಷರಾದ ಬಿಎಂ ರಝಕ್ ಬಳ್ಳಮಂಜ,  ಎ ಬೆಳ್ತಂಗಡಿ ವಿಧಾನಸಭಾ ಸದಸ್ಯರಾದ ಹನೀಫ್ ಪುಂಜಾಲಕಟ್ಟೆ, ಎನ್ಐವೈಎ ಪುಂಜಾಲಕಟ್ಟೆ ಇದರ ಅಧ್ಯಕ್ಷ ಸಾಜಿ ಹುಸೈನ್,  ಊರಿನ ಹಿರಿಯ ವ್ಯಕ್ತಿಗಳಾದ ಉಮರ್ ಹಾಜಿ, ಎಂಆರ್ ಎಸ್ ಕಾಂಪ್ಲೆಕ್ಸ್ ಮಾಲಕ ಉಮರ್ ಕತರ್ ಉಪಸ್ಥಿತರಿದ್ದರು.

ಪಿಎಫ್ಐ ಜಿಲ್ಲಾ ಸಮಿತಿ ಸದಸ್ಯರಾದ ಲತೀಫ್ ಪುಂಜಾಲಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News