ಕಡಂಬು: ಎಸ್ ಡಿಪಿಐ ವತಿಯಿಂದ ಗಣರಾಜ್ಯೋತ್ಸವ

Update: 2020-01-26 13:30 GMT

ಕಡಂಬು: ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಡಂಬು ಘಟಕದ ವತಿಯಿಂದ 71ನೇ ಗಣರಾಜ್ಯೋತ್ಸವ ದಿನವನ್ನು ಆಚರಿಸಲಾಯಿತು.

ಎಸ್ಡಿಪಿಐ ಬಂಟ್ವಾಳ ವಿಧಾನ ಸಭಾ ಸಮಿತಿಯ ಉಪಾಧ್ಯಕ್ಷ ಖಲಂದರ್ ಪರ್ತಿಪ್ಪಾಡಿ ಧ್ವಜಾರೋಹಣಗೈದು ಮಾತನಾಡಿದರು.

ಎಸ್ಡಿಪಿಐ ವಿಟ್ಲ ಪಡ್ನೂರೂ ವಲಯ ಸಮಿತಿಯ ಅಧ್ಯಕ್ಷ ಮಹ್ಮೂದ್ ಕಡಂಬು ಸಂವಿಧಾನದ ಪೀಠಿಕೆ ಬೋಧಿಸಿದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಹಸೈನಾರ್ ಬಿ.ಎಂ, ಎಸ್ಡಿಪಿಐ ಕಡಂಬು ಸಮಿತಿಯ ಅಧ್ಯಕ್ಷ  ಖಾದರ್ ಬೆದ್ರಕ್ಕಾಡು, ಶರೀಫ್ ಕೆ, ಅಬ್ದುಲ್ ಕುಞ್ಞಿ, ಅಝೀಝ್ ಉಪಸ್ಥಿತರಿದ್ದರು.

ಸಿರಾಜ್ ಕಡಂಬು ಸ್ವಾಗತಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News